Advertisement

‘ಮಾರೊ ಜಾವೊ’:ಸಮಸ್ಯೆ ಹೇಳಿಕೊಂಡು ಬಂದ ಪೋಷಕರಿಗೆ ಮ.ಪ್ರ ಶಿಕ್ಷಣ ಸಚಿವರ ಉದ್ಧಟತನದ ಉತ್ತರ    

04:47 PM Jun 30, 2021 | Team Udayavani |

ನವ ದೆಹಲಿ : ಶಾಲಾ ಶುಲ್ಕ ವಿನಾಯಿತಿ ಮಾಡುವಂತೆ ಮನವಿಯೊಂದಿಗೆ ಮಧ್ಯ ಪ್ರದೇಶ ಸರ್ಕಾರದ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಬಂದ ಪೋಷಕರಿಗೆ ಮಾರೊ ಜಾವೊ (ಗೋ ಡೈ/ ಹೋಗಿ ಸಾಯಿ) ಎಂದು ಹೇಳಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.

Advertisement

ಕೋವಿಡ್ ಬಿಕ್ಕಟ್ಟಿನ ಕಾರಣದಿಂದಾಗಿ ಆರ್ಥಿಕ ವ್ಯವಸ್ಥೆಯೇ  ಅಡಿಮೇಲಾಗಿದೆ. ಶಾಲಾ ಕಾಲೇಜುಗಳು ಮುಚ್ಚಿ ವರ್ಷಗಳೇ ಕಳೆದಿವೆ. ಖಾಸಗಿ ಶಾಲಾ ಕಾಲೇಜುಗಳು ಶುಲ್ಕವನ್ನು ಹೆಚ್ಚಳ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ನೇರವಾಗಿ ಸಚಿವರ ಬಳಿಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಮಾತನ್ನು ಹೇಳಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ : ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರು, ಈಗ ಸುಪ್ರೀಂ ಕೇಳಿದೆ : ಸಿದ್ದರಾಮಯ್ಯ

ಈ ಕುರಿತಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೆಗೆ ಪ್ರತಿಕ್ರಿಯಿಸಿದ ಪಾಲಕ್ ಮಹಾಸಂಘದ ಅಧ್ಯಕ್ಷ ಕಮಲ್ ವಿಶ್ವಕರ್ಮ, “ಹೈಕೋರ್ಟ್‌ನ ನಿರ್ದೇಶನದ ಹೊರತಾಗಿಯೂ, ಅನೇಕ ಶಾಲೆಗಳು ಪೋಷಕರನ್ನು ಪಾವತಿಸುವಂತೆ ಒತ್ತಾಯಿಸುತ್ತಿವೆ. ಟ್ಯೂಷನ್  ಶುಲ್ಕ ಹೊರತುಪಡಿಸಿ ಪೋಷಕರಿಂದ ಬೇರೆ ಯಾವುದೇ ಮೊತ್ತವನ್ನು ತೆಗೆದುಕೊಳ್ಳದಂತೆ ಹೈಕೋರ್ಟ್ ಶಾಲೆಗಳಿಗೆ ನಿರ್ದೇಶನ ನೀಡಿದೆ ಆದರೆ ಹಲವಾರು ಪೋಷಕರು ಹೆಚ್ಚಿನ ಶುಲ್ಕ ವಿಧಿಸುವ ಬಗ್ಗೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.

ಲಾಕ್‌ ಡೌನ್ ಸಮಯದಲ್ಲಿ ಅನೇಕ ಪೋಷಕರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಖಾಸಗಿ ಶಾಲೆಗಳು ಶುಲ್ಕದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಸಚಿವರು ಉದ್ಧಟತನದೊಂದಿಗೆ ಪ್ರತಿಕ್ರಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ಏತನ್ಮಧ್ಯೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಧ್ಯಪ್ರದೇಶ ಸರ್ಕಾರವು ತನ್ನ “ಅಧಿಕಾರದ ಅಹಂಕಾರ”ವನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನೂ ಓದಿ :  ನಾಳೆಯಿಂದ ಹೀರೋ ಮೊಟೊಕಾರ್ಪ್ ವಾಹನಗಳು ದುಬಾರಿ..! ಇಲ್ಲಿದೆ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next