Advertisement

ದತ್ತ ಪೀಠವನ್ನು ಹಿಂದೂಗಳಿಗೆ ನೀಡಿ; ಇಲ್ಲವಾದಲ್ಲಿ ಶಾಸಕರು-ಸಂಸದರಿಗೆ ಮುತ್ತಿಗೆ; ಮುತಾಲಿಕ್

04:56 PM Jul 02, 2020 | sudhir |

ಹುಬ್ಬಳ್ಳಿ: ಚಿಕ್ಕಮಗಳೂರಿನಲ್ಲಿನ ದತ್ತ ಪೀಠವನ್ನು ಹಿಂದೂಗಳಿಗೆ ನೀಡಬೇಕೆಂದು ಕೋರಿ ಜು.೫ರಂದು ರಾಜ್ಯಾದ್ಯಂತ ಒಂದು ಕೋಟಿ ಜಪಯಜ್ಞ ಮಾಡಲಾಗುತ್ತಿದ್ದು, ಸರಕಾರ ಸ್ಪಂದಿಸದಿದ್ದರೆ, ಶಾಸಕರು-ಸಂಸದರಿಗೆ ಮುತ್ತಿಗೆ ಹಾಕಲಾಗುವುದು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 22 ವರ್ಷಗಳಿಂದ ದತ್ತಪೀಠ ವಿವಾದ ಮುಂದುವರೆದಿದ್ದು, ದತ್ತಪೀಠ ಹೋರಾಟ ಕೃಪೆಯಿಂದಲೇ ಅಧಿಕಾರ ಹಿಡಿದಿರುವ ಬಿಜೆಪಿ ಸರಕಾರ ಇದ್ದ ಅಡ್ಡಿಗಳನ್ನು ನಿವಾರಿಸಿ ದತ್ತಪೀಠವನ್ನು ಹಿಂದೂಗಳ ಸುಪರ್ದಿಗೆ ನೀಡಬೇಕೆಂದರು. ಸಿದ್ದ ರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದಾಗ ದತ್ತಪೀಠ ಕುರಿತಾಗಿ ಆಯೋಗ ದಿಂದ ಸಲ್ಲಿಕೆಯಾಗಿರುವ ವರದಿ ಹಿಂದೂ ವಿರೋಧಿ, ಎಡಪಂಥೀಯ ವಿಚಾರ ಹೊಂದಿದ್ದು ಅದನ್ನು ತಿರಸ್ಕರಿಸಬೇಕೆಂದರು. ದತ್ತಪೀಠ ಹಿಂದೂಗಳಿಗೆ ನೀಡುವ ನಿಟ್ಟಿನಲ್ಲಿ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು. ಈ ವಿಚಾರದಲ್ಲಿ ಸರಕಾರದ ಮೇಲೆ ಒತ್ತಡ ತರದಿದ್ದರೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಸಂಸದರಿಗೆ ಮುತ್ತಿಗೆ ಹಾಕಲಾಗಿವುದು ಎಂದರು.

ಕೊರೊನಾಕ್ಕೆ ಡಾ.ಗಿರಿಧರ ಕಜೆ, ಬಾಬಾ ರಾಮದೇವ ಅವರು ಆಯುರ್ವೇದ ಔಷಧ ಅಭಿವೃದ್ಧಿ ಪಡಿಸಿದ್ದು, ಸಂತಸದ ವಿಚಾರ. ಆದರೆ ತಾಂತ್ರಿಕ ಕಾರಣ ನೆಪದಿಂದ ಪತಂಜಲಿ ಉತ್ಪನ್ನಕ್ಕೆ ತಡೆ ಯತ್ನ ಸರಿಯಲ್ಲ. ಬಹುರಾಷ್ಟ್ರೀಯ ಕಂಪನಿಗಳ ಲಾಬಿ ಇದರ ಹಿಂದೆ ಕೆಲಸ ಮಾಡಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next