Advertisement

ಸ್ಮಶಾನದ ಸ್ವತ್ಛತೆಗೆ ಆದ್ಯತೆ ನೀಡಿ

05:50 PM Jan 29, 2021 | Team Udayavani |

ಮಹಾಲಿಂಗಪುರ: ಪರಮಾತ್ಮ ನೆಲೆಸಿರುವ ಮುಕ್ತಿಕೇಂದ್ರ ಹಿಂದೂ ಸ್ಮಶಾನದ ಸ್ವತ್ಛತೆಗೆ ಪಟ್ಟಣದ ಎಲ್ಲ ಸಮಾಜಗಳ ಹಿರಿಯರು, ಯುವಕರು ಆದ್ಯತೆ ನೀಡಬೇಕು ಎಂದು ರನ್ನಬೆಳಗಲಿ ಪಪಂ ಅಧ್ಯಕ್ಷ ಸಿದ್ದುಗೌಡ ಪಾಟೀಲ ಹೇಳಿದರು.

Advertisement

ರನ್ನಬೆಳಗಲಿ ಪಪಂ ವತಿಯಿಂದ ಹಿಂದೂ ಸ್ಮಶಾನದಲ್ಲಿ ಹಮ್ಮಿಕೊಂಡಿದ್ದ ಸ್ವತ್ಛ ಭಾರತ ಅಭಿಯಾನದ ಸ್ವತ್ಛತಾ ಕಾರ್ಯಕ್ರಮದ ಸೇವೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇವಲ ಪಪಂ ಸಿಬ್ಬಂದಿ ಮತ್ತು ಅಧಿಕಾರಿಗಳೇ ಪಟ್ಟಣದ ಸ್ವತ್ಛತೆ ಮಾಡಲಿ ಎಂಬ ಉದಾಸೀನ ಬೇಡ. ದಿನನಿತ್ಯದ ಸ್ವತ್ಛತೆಗೆ ಪಪಂ ಪೌರ ಕಾರ್ಮಿಕರು ಆದ್ಯತೆ ನೀಡುತ್ತಾರೆ. ಪಟ್ಟಣದಲ್ಲಿನ ವಿವಿಧ ಸ್ಮಶಾನ, ದೇವಸ್ಥಾನಗಳು, ಸಾರ್ವಜನಿಕ ಸಮುದಾಯ ಭವನಗಳು, ಶಾಲಾ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳ ಸ್ವತ್ಛತೆಗೆ ಪಟ್ಟಣದ ಯುವಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಪಟ್ಟಣದ ಸ್ವತ್ಛತೆಗೆ ಶ್ರಮಿಸಬೇಕಾಗಿದೆ ಎಂದರು.

ಇದನ್ನೂ ಓದಿ:ಗ್ರಾಮೀಣ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ ಓಡಿಸಿ

ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ರನ್ನಬೆಳಗಲಿ ಪಪಂ ಸದಸ್ಯರಾದ ಅಶೋಕ ಸಿದ್ದಾಪೂರ, ಮಹಾಲಿಂಗ ಲಾಗದವರ, ಮಹಾಲಿಂಗ ಪುರಾಣಿಕ, ಮಹಾದೇವ ಮುರನಾಳ, ಪಾಂಡಪ್ಪ ಸಿದ್ದಾಪುರ, ಲಕ್ಷ್ಮಣ ಕಲ್ಲೋಳೆಪ್ಪಗೋಳ, ಮುಖಂಡರಾದ ಧರೆಪ್ಪ ಸಾಂಗ್ಲಿಕರ, ಮಹಾಲಿಂಗ ಗುಂಜಿಗಾಂವಿ, ಯಲ್ಲಪ್ಪ ಅಮಾತಿ, ಭೀಮನಗೌಡ ಪಾಟೀಲ, ಶಿವನಗೌಡ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next