Advertisement

ಪಂ|ಪಂಚಾಕ್ಷರಿ ಗವಾಯಿ ಹೆಸರಿನಲ್ಲಿ  ಪ್ರಶಸ್ತಿ ನೀಡಿ

05:04 PM Jun 13, 2018 | Team Udayavani |

ಧಾರವಾಡ: ಸರ್ಕಾರ ಪಂ| ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು ಎಂದು ಬಸವ ಶಾಂತಿ ಮಿಶನ್‌ ಅಧ್ಯಕ್ಷ ಮಹಾದೇವ ಹೊರಟ್ಟಿ ಹೇಳಿದರು. ನಗರದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಗಾನಯೋಗಿ ಪಂ| ಪಂಚಾಕ್ಷರಿ ಗವಾಯಿಗಳ 74ನೇ ಸ್ಮ„ತಿ ಸಂಗೀತೋತ್ಸವದಲ್ಲಿ ಅವರು ಮಾತನಾಡಿದರು.

Advertisement

ಪಂ| ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾದ ಹೆಜ್ಜೆ ಇಟ್ಟಿದ್ದಾರೆ. ಅವರ ಶಿಷ್ಯವೃಂದ ದೇಶ-ವಿದೇಶದಲ್ಲಿ ಹೆಸರು ಮಾಡಿದೆ. ಪಂ| ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರ ಸಂಗೀತ ಸೇವೆಗೆ ಗೌರವ ಕೊಡುವ ಕೆಲಸ ಆಗಬೇಕು ಎಂದರು. ನರರೋಗ ವೈದ್ಯ ಡಾ| ಎಸ್‌.ಪಿ. ಬಳಿಗಾರ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು. ಮಾನ್ವಿಯ ವಿರೂಪಾಕ್ಷಯ್ಯ ವಂದಲಿ ಗಾಯನ ಹಾಗೂ ಪುಣೆಯ ರಯೀಸ್‌ ಬಾಲೇಖಾನ್‌ ಸಿತಾರ ವಾದನ ಪ್ರಸ್ತುತ ಪಡಿಸಿದರು. ಗುರುಪ್ರಸಾದ ಹೆಗಡೆ ಸಂವಾದಿನಿ, ಡಾ| ರವಿಕಿರಣ ನಾಕೋಡ, ಕೇಶವ ಜೋಶಿ ತಬಲಾದಲ್ಲಿ ಸಾಥ್‌ ನೀಡಿದರು.

ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಕಾರ್ಯದರ್ಶಿ ಪಂ| ಎಂ. ವೆಂಕಟೇಶಕುಮಾರ, ಬಿ.ಎಸ್‌. ಮಠ, ಡಾ| ಶಾಂತಾರಾಮ ಹೆಗಡೆ, ಡಾ| ಮಲ್ಲಿಕಾರ್ಜುನ ತರ್ಲಘಟ್ಟ, ಡಾ| ವೀರಣ್ಣಾ ಹೂಗಾರ, ಸುಜಾತಾ ಗೂರವ (ಕಮ್ಮಾರ) ಇದ್ದರು. ಅರ್ಜುನ ವಠಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next