Advertisement
ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಕಲಿಯದವರ ಕಾಮಧೇನು.
Related Articles
Advertisement
ರಂಗಭೂಮಿಗಾಗಿ ಸರ್ಕಾರವೇನೋ ಅನುದಾನ ನೀಡುತ್ತಿದೆ. ಆದರೆ, ಅದು ಯೋಜನಾಬದ್ಧವಾಗಿ ಬಳಕೆ ಆಗುತ್ತಲೇ ಇಲ್ಲ. ಯೋಜನಾಬದ್ಧವಾಗಿಯೇ ಅನುದಾನ ಬಳಕೆ ಆಗಬೇಕಿದೆ. ಇಂದಿನ ಯುವ ಜನಾಂಗಕ್ಕೆ ಬದುಕಿನ ಪಾಠ ಕಲಿಸುವ ಶಕ್ತಿ ಹೊಂದಿರುವ ವೃತ್ತಿ ರಂಗಭೂಮಿಯ ಪರಿಚಯ ಮಾಡಿಕೊಡುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.
ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಮನೋರಂಜನೆಯೇ ನಾಟಕಗಳ ಮುಖ್ಯ ಉದ್ದೇಶ ಅಲ್ಲ. ಜನಸಾಮಾನ್ಯರು ಎದುರಿಸುವ ಬವಣೆ, ಸಮಸ್ಯೆ, ದೌರ್ಜನ್ಯ, ಭ್ರಷ್ಟಾಚಾರ, ಸಮಾಜದ ಓರೆಕೋರೆಗಳ ಮೇಲೆ ತನ್ನದೇ ಧಾಟಿಯಲ್ಲಿ ಬೆಳಕು ಚೆಲ್ಲಿ, ಜಾಗೃತಿ ಮೂಡಿಸುವ ಪ್ರಯತ್ನವೂ ನಡೆಯುತ್ತದೆ. ಬೀದಿ ನಾಟಕಗಳು ಅಂತಹ ಕೆಲಸ ಮಾಡುತ್ತಿವೆ.
ವೃತ್ತಿ ರಂಗಭೂಮಿಯಂತಹ ಪ್ರಭಾವಿ ಮಾಧ್ಯುಮದಲ್ಲಿ ಹಿಂದಿದ್ದ ವೃತ್ತಿಪರತೆ, ಸಾಮಾಜಿಕ ಕಾಳಜಿ ಕಂಡು ಬರುತ್ತಿಲ್ಲ. ಇಂದಿನ ಕಲಾವಿದರಲ್ಲಿ ಉದಾಸೀನತೆ, ನಿರ್ಲಕ್ಷé ಭಾವನೆ, ರಂಗಾಸಕ್ತಿಯ ಕೊರತೆಯೇ ಹೆಚ್ಚಾಗಿ ಕಾಣ ಬರುತ್ತಿದೆ ಎಂದು ತಿಳಿಸಿದರು. ಮಹಾನಗರಪಾಲಿಕೆ ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ ಮಾತನಾಡಿ, ವೃತ್ತಿ ರಂಗಭೂಮಿಯ ತವರೂರು ಎಂಬ ಖ್ಯಾತಿಯ ದಾವಣಗೆರೆಯಲ್ಲಿ ಹಿಂದಿದ್ದಂತಹ ರಂಗಭೂಮಿಯ ಪ್ರಭಾವ ಇಲ್ಲ.
ಆದರೂ, ವಿವಿಧ ಪ್ರಭಾವಗಳ ಮಧ್ಯದಲ್ಲಿಯೂ ರಂಗಭೂಮಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ವೃತ್ತಿ ರಂಗಭೂಮಿ ಕಲಾವಿದರ ಸಂಘದ ರಾಜ್ಯ ಅಧ್ಯಕ್ಷ ಎ. ಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಬಸವರಾಜ್ ಐರಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಇತರರು ಇದ್ದರು.