Advertisement

ಕುರಿಗಾಯಿ ಜೀವ ಉಳಿಸಲು ಹೋದ ಬಾಲಕಿ ಸಾವು

10:15 PM Jul 16, 2021 | Team Udayavani |

ಯಾದಗಿರಿ: ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ಹೊರವಲಯದಲ್ಲಿ ನಿಂತ ನೀರಿನಲ್ಲಿ ಕಾಲು ಜಾರಿ ಬಿದ್ದ ಕುರಿಗಾಯಿ ಯನ್ನು ರಕ್ಷಿಸಲು ಹೋಗಿ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಶುಕ್ರವಾರ ಗ್ರಾಮದ ಸಮೀಪದ ಅರಕಲ ಬಂಡೆಯ ನಿಂತ ನೀರಿನಲ್ಲಿ ಕುರಿಗಾಯಿ ಒಬ್ಬ ನೀರು ಕುಡಿಯಲು ಹೋದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದ . ಆತನನ್ನು ರಕ್ಷಿಸಲು ಹೋದ ರಾಜಮ್ಮ ನೀರಿಗೆ  ಬಿದ್ದು ಈಜು ಬಾರದ ಕಾರಣ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಕುರಿಗಾಯಿ ಜೀವ ಉಳಿಸಲು ಹೋಗಿ ಶಂಕರಪ್ಪ ವಡ್ಡರ್ ಮಗಳು 16 ವರ್ಷದ ರಾಜಮ್ಮ ತನ್ನ ಜೀವ ಕಳೆದುಕೊಂಡಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next