Advertisement

ಮೃಗಾಲಯದಲ್ಲಿ ಜಿರಾಫೆ, ನೀರು ಕುದುರೆ ಮರಿಗಳ ಜನನ

11:52 AM May 30, 2018 | Team Udayavani |

ಮೈಸೂರು: ಮೈಸೂರು ಮೃಗಾಲಯದಲ್ಲಿ ಹೆಣ್ಣು ಜಿರಾಫೆ ಹಾಗೂ ನೀರು ಕುದುರೆಯ ಮರಿಗಳ ಜನನವಾಗಿದೆ. ಮೈಸೂರು ಮೃಗಾಲಯದ ಕೃಷ್ಣ ಮತ್ತು ಜಲೇಶಿ ನೀರು ಕುದುರೆಗಳಿಗೆ ಒಂದು ಮರಿ ಜನಿಸಿದ್ದು, ಕೃಷ್ಣರಾಜ ಮತ್ತು ಖುಷಿ ಜಿರಾಫೆಗಳಿಗೆ ಒಂದು ಹೆಣ್ಣು ಮರಿ ಜನಿಸಿದೆ.

Advertisement

ಜಲೇಶಿ ನೀರು ಕುದುರೆ ಹಾಗೂ ಖುಷಿ ಜಿರಾಫೆಯು ತಂತಮ್ಮ ಮರಿಗೆ ಹಾಲುಣಿಸುವುದರ ಮೂಲಕ ಚೆನ್ನಾಗಿ ಆರೈಕೆ ಮಾಡುತ್ತಿದ್ದು, ತಮ್ಮ ಮರಿಗಳನ್ನು ಪೋಷಿಸುವುದಾಗಿ ಆಶಿಸಲಾಗಿದೆ. ಮರಿಗಳು ಹಾಗೂ ತಾಯಂದಿರ ಆರೈಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next