Advertisement

ಘಟಾನುಘಟಿಗಳನ್ನೇ ಕೆಡವಿ ಹಾಕಿದ “ದೈತ್ಯ ಸಂಹಾರಿಗಳು’!

07:59 PM Jun 04, 2024 | Shreeram Nayak |

ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೆಲವು ಘಟಾನುಘಟಿಗಳನ್ನು ಮಣ್ಣುಮುಕ್ಕಿಸಿ “ದೈತ್ಯಸಂಹಾರಿಗಳು’ ಎನಿಸಿಕೊಂಡಿದ್ದಾರೆ. ಇಡೀ ದೇಶದ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 3 ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ ಅವರನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ. ಸಿ.ಎನ್‌ ಮಂಜುನಾಥ್‌ ಮೊದಲ ಪ್ರಯತ್ನದಲ್ಲೇ ಸೋಲಿಸಿದ್ದಾರೆ. ಕೇಂದ್ರ ಸಚಿವರಾಗಿದ್ದ ಬೀದರ್‌ ಸಂಸದ ಭಗವಂತ ಖೂಬಾ ಅವರನ್ನು 27 ವರ್ಷದ ಎಳೆಯ ಹುಡುಗ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್‌ ಖಂಡ್ರೆ ಸೋಲುಣಿಸಿದ್ದಾರೆ.
ಚಿಕ್ಕೋಡಿಯಲ್ಲಿ ಪ್ರಿಯಾಂಕ ಜಾರಕಿಹೊಳಿ ಅವರು ಹಾಲಿ ಸಂಸದ ಅಣ್ಣಾ ಸಾಹೇಬ್‌ ಜೊಲ್ಲೆ ಅವರಿಗೆ ಸೋಲಿನ ರುಚಿ ಕಾಣಿಸಿದ್ದಾರೆ.

Advertisement

ಪೆನ್‌ಡ್ರೈವ್‌ ಪ್ರಕರಣದಿಂದ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಸಾಂಪ್ರದಾಯಿಕ ರಾಜಕೀಯ ಎದುರಾಳಿ ಮಾಜಿ ಸಂಸದ ದಿ. ಜಿ.ಪುಟ್ಟಸ್ವಾಮಿಗೌಡರ ಕುಟುಂಬದ ಕುಡಿ ಶ್ರೇಯಸ್‌ ಪಟೇಲ್‌ ಸೋಲಿಸಿದ್ದಾರೆ. ಈ ಘಟಾನುಘಟಿಗಳನ್ನು ಸೋಲಿಸಿ ದೈತ್ಯ ಸಂಹಾರಿ ಎನಿಸಿಕೊಂಡವರೆಲ್ಲರೂ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ಗೆಲವು ಪಡೆದವರು.

ದೈತ್ಯ ಸಂಹಾರಿಗಳು
– ಡಾ. ಸಿ.ಎನ್‌. ಮಂಜುನಾಥ್‌-ಬಿಜೆಪಿ
– ಪ್ರಿಯಾಂಕ ಜಾರಕಿಹೊಳಿ- ಕಾಂಗ್ರೆಸ್‌
– ಸಾಗರ್‌ ಖಂಡ್ರೆ-ಕಾಂಗ್ರೆಸ್‌
– ಶ್ರೇಯಸ್‌ ಪಟೇಲ್‌-ಕಾಂಗ್ರೆಸ್‌

 

Advertisement

Udayavani is now on Telegram. Click here to join our channel and stay updated with the latest news.

Next