Advertisement

ಹುತಾತ್ಮರಿಂದ ಪ್ರೇರಣೆ ಪಡೆಯಿರಿ: ಗಣೇಶ್‌ ಭಟ್‌

07:35 AM Sep 12, 2017 | Team Udayavani |

ಉಡುಪಿ: ಬಟಾ ಬಯಲಿನಲ್ಲಿರುವ ಅರಣ್ಯ ಸಂಪತ್ತನ್ನು ಸಂಕ್ಷಿಸುವ ಸಂದರ್ಭದಲ್ಲಿ ಹುತಾತ್ಮರಾಗುವ ಅರಣ್ಯ ರಕ್ಷಕರರಿಂದ ಪ್ರೇರಣೆ ಪಡೆಯಿರಿ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್‌ ಎಸ್‌. ಭಟ್‌ ಹೇಳಿದರು.

Advertisement

ಅವರು ಸೆ. 11ರಂದು ಅರಣ್ಯ ಹುತಾತ್ಮರ ಸ್ಮರಣಾರ್ಥವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ  ಕರ್ನಾಟಕ ರಾಜ್ಯ  ಉಪ ವಲಯ ಅರಣ್ಯ ಅಧಿಕಾರಿಗಳ ಸಂಘದ ಸದಸ್ಯರಿಂದ ಜರಗಿದ 17ನೇ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅರಣ್ಯ ಸಂರಕ್ಷಣೆಯೊಂದು ನಿತ್ಯ ಸವಾಲುಗಳನ್ನು ಎದುರಿಸುವ ವಿಭಾಗ. ಇಲ್ಲಿ ಕಾರ್ಯನಿರ್ವಹಿಸುವ ಪ್ರತಿಯೋರ್ವರು ಅನುಪಮ ಸೇವೆಯನ್ನು ನೀಡಬೇಕೆಂದು ಅವರು ಕೋರಿದರು.ಕ.ರಾ.ಉ.ಅ. ಅಧಿಕಾರಿಗಳ ಸಂಘದ ಅಧ್ಯಕ್ಷ ಮುಡೂರ ಕೋಠಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರಕಾರಿ ಆಸ್ಪತ್ರೆಯ ಆರ್‌.ಎಂ.ಒ.ಡಾ| ಚಂದ್ರಶೇಖರ ಅಡಿಗ, ಕ.ರಾ.ಉ.ಅ. ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ಪ್ರಕಾಶ್‌ಚಂದ್ರ, ಕ.ರಾ. ಅರಣ್ಯ ರಕ್ಷಕರು ಮತುತ ವೀಕ್ಷಕರ ಸಂಘದ ಅಧ್ಯಕ್ಷರಾದ ಆನಂದ ಬಳೇಗಾರ, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌, ಕುಂದಾಪುರ ಎ.ಎಸ್‌.ಎಫ್. ಎಂ.ಎಂ. ಅಚ್ಚಪ್ಪ ಮತ್ತಿತರರು ಉಪಸ್ಥಿತರಿದ್ದರು. 

ಸಂಘದ ಉಪಾಧ್ಯಕ್ಷ ನಾಗೇಶ ಬಿಲ್ಲವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದಿಲೀಪ್‌ ಕುಮಾರ್‌ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕರುಣಾಕರ ಜೆ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next