Advertisement

ಭೂಮಾಪನ ಕಚೇರಿಯಲ್ಲಿ ರಜೆ ಹಾಕಿದ ಅಧಿಕಾರಿ- ಅರ್ಜಿ ನೀಡಿ ತಿಂಗಳಾದರೂ ಕೆಲಸ ಮಾಡದ ಇಲಾಖೆ

02:47 PM Dec 14, 2021 | Team Udayavani |

ದಾಂಡೇಲಿ : ನಗರ ಸಭೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಮಾಪನಾ ಕಚೇರಿಗೆ ಭೂಮಿಯ ಕುರಿತಾಗಿ ವಿವಿಧ ದಾಖಲಾತಿಗಳಿಗೆ ಸಂಬಂಧಿಸಿದಂತೆ ಅರ್ಜಿ ನೀಡಿ ತಿಂಗಳಾದರೂ ಕೆಲಸಗಳಾಗುತ್ತಿಲ್ಲ.

Advertisement

ಇದಲ್ಲದೇ ಭೂಮಾಪನಾ ಕಚೇರಿಯ ಅಧಿಕಾರಿ ರಜೆ ಹಾಕಿ ಹದಿನೈದು ದಿನಗಳಾಗಿದ್ದು, ಈ ನಡುವೆ ಸಾರ್ವಜನಿಕರ ಅಗತ್ಯ ಕೆಲಸ ಕಾರ್ಯಗಳು ಆಗದಿರುವುದರಿಂದ ತೀವ್ರ ತೊಂದರೆಯಾಗಿದೆ. ಸಕಾಲಿಕವಾಗಿ ಸ್ಪಂದನೆ ಸಿಗುತ್ತಿಲ್ಲ.

ಮೇಲ್ನೋಟಕ್ಕೆ ಭ್ರಷ್ಟಚಾರದ ವಾಸನೆ ಕಂಡು ಬರುತ್ತಿದ್ದು, ಭೂ ಮಾಪಮಾನ ಕಚೇರಿಯ ಅಧಿಕಾರಿಯನ್ನು ಮತ್ತು ಇಲಾಖೆಯ ಕಾರ್ಯವೈಖರಿಯನ್ನು ತನಿಖೆಗೊಳಪಡಿಸಬೇಕೆಂದು ನಗರದ ಸಾಮಾಜಿಕ ಹೋರಾಟಗಾರರಾದ ಪ್ರೇಮಾನಂದ.ವಿ.ಗವಸ ಅವರು ನಗರದ ಭೂಮಾಪನಾ ಕಚೇರಿಯ ಮುಂಭಾಗದಲ್ಲಿ ಮಾದ್ಯಮದ ಮೂಲಕ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next