Advertisement

25 ಕೆಜಿ ಜಿಲೆಟಿನ್‌ ವಶ

06:40 PM Feb 07, 2021 | Team Udayavani |

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ಸರ್ವೇ ನಂಬರ್‌ 77 ಮತ್ತು ಇತರೆ ಭಾಗದ ಕಲ್ಲು ಕ್ವಾರಿ ಸ್ಥಳಗಳ ಮೇಲೆ ಸ್ಥಳೀಯ ಪೊಲೀಸರು ಮತ್ತು ರಾಯಚೂರಿನ ಆಂತರಿಕ ಭದ್ರತಾ ವಿಭಾಗದ ಅ ಧಿಕಾರಿಗಳ ತಂಡ ದಾಳಿ ನಡೆಸಿ ನ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿದೆ.

Advertisement

ವೆಂಕಟಗಿರಿ ಹೋಬಳಿ ವ್ಯಾಪ್ತಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದ  ಕಲ್ಲುಕ್ವಾರಿಯಲ್ಲಿ ಕಲ್ಲು ನ್ಪೋಟ ಮಾಡಲು ಅಕ್ರಮವಾಗಿ ಬಳಕೆ ಮಾಡುತ್ತಿದ್ದ 25 ಕೆಜಿ ಜಿಲೆಟಿನ್‌ ಹಾಗೂ ಸ್ಪೋಟಕ ವಸ್ತು ವಶಕ್ಕೆ ಪಡೆಯಲಾಗಿದೆ. ಈ ನ್ಪೋಟಕ ವಸ್ತು ಅಕ್ರಮ ಸಂಗ್ರಹ ಪ್ರಕರಣಕ್ಕೆ ಸಂಬಂಧಿ ಸಿದಂತೆ  ಕಲ್ಲುಕ್ವಾರಿ ಮತ್ತು ಕ್ರಷರ್‌ ಮಾಲೀಕರಾದ ಸುಬ್ರಮಣ್ಯ, ನಾಗರಾಜ, ತಿರುಮಲ ಎಂಟರಪ್ರೈಜರ್ಸ್‌ ಮಾಲೀಕರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ :ಹೆದ್ದಾರಿ ತಡೆದ ಅನ್ನದಾತರು

ದಾಳಿಯ ಸಂದರ್ಭದಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜಿನಕೊಪ್ಪ, ಸಿಪಿಐ ಉದಯರವಿ, ಗ್ರಾಮೀಣ ಪಿಎಸ್‌ಐ ಜೆ. ದೊಡ್ಡಪ್ಪ, ರಾಯಚೂರು ಆಂತರಿಕ ಭದ್ರತಾ ವಿಭಾಗದ ಸಿಪಿಐ ಸತೀಶ, ಕಂದಾಯ ನಿರೀಕ್ಷಕ ಬಸವರಾಜ ಸೇರಿ ಗಣಿಭೂವಿಜ್ಞಾನ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next