Advertisement

Rajasthan: ಪೈಲಟ್‌ಗೆ ದುಂಬಾಲು ಬಿದ್ದ ಗೆಹ್ಲೋಟ್‌ ಆಪ್ತ?

11:32 PM Oct 24, 2023 | Team Udayavani |

ರಾಜಸ್ಥಾನದಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ ಹಾಗೂ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ನಡುವೆ ಈಗಲೂ ಶೀತಲ ಸಮರ ಮುಂದು­ವರಿದಿದೆ. ಈ ಮಧ್ಯೆ ಗೆಹ್ಲೋಟ್‌ ಅವರ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಲೋಕೇಶ್‌ ಶರ್ಮಾ ದಿಢೀರನೆ ಸಚಿನ್‌ ಪೈಲಟ್‌ರನ್ನು ಭೇಟಿಯಾ ಗಿದ್ದಾರೆ.

Advertisement

ಬಿಕಾನೇರ್‌ ಪಶ್ಚಿಮ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಶರ್ಮಾ, ತಮಗೆ ಟಿಕೆಟ್‌ ಕೊಡಿಸುವಂತೆ ಕೇಳುವ ಉದ್ದೇಶ ದಿಂದಲೇ ಪೈಲಟ್‌ರನ್ನು ಭೇಟಿಯಾಗಿದ್ದಾರೆ ಎಂಬ ಗುಸು ಗುಸು ಹಬ್ಬತೊಡಗಿದೆ. ಇವರಿಬ್ಬರ ಭೇಟಿಯು, “ಗೆಹ್ಲೋಟ್‌ ಆಪ್ತರಾಗಿರುವ ಶರ್ಮಾಗೂ ಪೈಲಟ್‌ಗೂ ಏನು ಸಂಬಂಧ, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಗೆಹ್ಲೋಟ್‌ರನ್ನು ಕಾಂಗ್ರೆಸ್‌ ಹೈಕಮಾಂಡ್‌ ದೂರವಿಟ್ಟಿದೆಯೇ’ ಎಂಬೆಲ್ಲ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next