Advertisement

ಆಟೋ ಚಾಲಕನ ಪುತ್ರಿಗೆ 6 ಚಿನ್ನದ ಪದಕ

11:45 PM Nov 29, 2021 | Team Udayavani |

ರಾಯಚೂರು: ಬಹಳ ವರ್ಷಗಳ ಬಳಿಕ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸೋಮವಾರ ನೆರವೇರಿತು.

Advertisement

ಘಟಿಕೋತ್ಸವಕ್ಕೆ ಚಾಲನೆ ನೀಡಿದ ರಾಜ್ಯಪಾಲ ಡಾ| ಥಾವರಚಂದ್‌ ಗೆಹ್ಲೋಟ್, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪ್ರಮಾಣಪತ್ರ ವಿತರಿಸಿದರು.

ಘಟಿಕೋತ್ಸವದಲ್ಲಿ 303 ಸ್ನಾತಕ, 107, ಸ್ನಾತಕೋತ್ತರ, 26 ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು. ಕೇರಳದ ಮಲಪ್ಪುರಂ ಜಿಲ್ಲೆ ನಿಲಂಬೂರ್‌ ನಗರದ ಆಟೋ ಚಾಲಕ ಕೆ. ಸುರೇಶಕುಮಾರ್‌ ಅವರ ಪುತ್ರಿ ಗೀತಿಕಾ ಟಿ.ವಿ. ಆರು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈಗ ಕೇರಳ ಕೃಷಿ ವಿ.ವಿ.ಯಲ್ಲಿ ಪ್ಲಾಂಟ್‌ ಪೆಥೋಲಜಿಯಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next