Advertisement
ತೂಕ ಪರೀಕ್ಷೆ: ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನ ಬರೋಬ್ಬರಿ 5650 ಕೆ.ಜಿ ತೂಕದೊಂದಿಗೆ ತನ್ನ ಬಾಹುಬಲ ಪ್ರದರ್ಶಿಸಿದರೆ ಮೊದಲ ತಂಡದಲ್ಲಿ ಬಂದಿರುವ ಉಳಿದ ಆನೆಗಳಾದ ವರಲಕ್ಷ್ಮೀ 3120 ಕೆ.ಜಿ, ಧನಂಜಯ 4045 ಕೆ.ಜಿ.,ಗೋಪಿ 4435 ಕೆ.ಜಿ, ವಿಕ್ರಮ 3985 ಕೆ.ಜಿ, ಹಾಗೂ ಚೈತ್ರ 2920 ಕೆ.ಜಿ ತೂಕವಿದೆ.
Related Articles
Advertisement
ಅರ್ಜುನ ಮತ್ತು ವರಲಕ್ಷ್ಮೀ ಆನೆಗಳನ್ನು ಹೊರತುಪಡಿಸಿದರೆ, ನಾಲ್ಕು ಆನೆಗಳೂ ಈ ವರ್ಷ ಮೊದಲ ತಂಡದಲ್ಲಿ ಕರೆತರಲಾಗಿದೆ. ವಿಜಯದಶಮಿ ದಿನ ಆನೆಗಳು ಸುಮಾರು ಐದು ಗಂಟೆ ಕಾಲ, 5 ಕಿ.ಮೀ ದೂರ ಆನೆಗಳು ಮೆರವಣಿಗೆಯಲ್ಲಿ ಸಾಗಬೇಕಿರುವುದರಿಂದ ಅವುಗಳ ದೈಹಿಕ ಸಾಮರ್ಥ್ಯ ಅಳೆಯಲು ತಾಲೀಮು ಆರಂಭಿಸುವ ಮುನ್ನ ಹಾಗೂ ಜಂಬೂಸವಾರಿಯ ಹಿಂದಿನ ದಿನ ಆನೆಗಳನ್ನು ತೂಕ ಮಾಡಿಸಲಾಗುತ್ತದೆ.
ವಿಶೇಷ ಆರೈಕೆ: ಗುರುವಾರದಿಂದ ಆನೆಗಳಿಗೆ ವಿಶೇಷ ಆರೈಕೆ ನೀಡಲಾಗುತ್ತಿದೆ. ಬೆಲ್ಲ, ತೆಂಗಿನಕಾಯಿ, ಮುದ್ದೆ, ಭತ್ತದ ಕುಸುರೆ, ಬೆಣ್ಣೆ ಸೇರಿದಂತೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ತಿನ್ನಿಸಲಾಗುತ್ತದೆ. ಆನೆಗಳ ಮಾವುತರು ಮತ್ತು ಕಾವಾಡಿಗಳು ಆನೆಗಳಿಗೆ ನಿತ್ಯ ಮೈತೊಳೆದು ಹಣೆಗೆ ಹರಳೆಣ್ಣೆ ಹಚ್ಚಿ, ಭತ್ತದ ಕುಸುರೆ ತಿನ್ನಿಸಿ ವಿಶೇಷ ಆರೈಕೆ ಮಾಡುತ್ತಾರೆ ಎಂದರು.
ಎರಡನೇ ತಂಡದ ಆನೆಗಳು ಸೆ.14ರಂದು ಆಗಮಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಆನೆಗಳಿಗೆ ಭಾರ ಹೊರುವ ಹಾಗೂ ಮರದ ಅಂಬಾರಿ ಹೊರುವ ತಾಲೀಮು ನೀಡಲಾಗುವುದು ಎಂದು ತಿಳಿಸಿದರು.