Advertisement

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

10:51 PM Apr 19, 2024 | Team Udayavani |

ಮೈಸೂರು: ಪ್ರಧಾನಿ ಮೋದಿ ಕುರಿತು ಹಾಡು ರಚಿಸಿದ್ದ ಯುವಕನೋರ್ವ ಅದರ ಪ್ರಮೋಷನ್‌ಗಾಗಿ ಸಬ್‌ ಸ್ಕ್ರೈಬ್ ಮಾಡುವ ವೇಳೆ ಅನ್ಯಕೋಮಿನ ಗುಂಪೊಂದು ಹಲ್ಲೆ ನಡೆಸಿ ರುವ ಘಟನೆ ಶುಕ್ರವಾರ ನಡೆದಿದೆ.

Advertisement

ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಯುವಕ, ಯೂ ಟ್ಯೂಬರ್‌ ರೋಹಿತ್‌ ಹಲ್ಲೆಗೊಳಗಾದ ಯುವಕ. ಶುಕ್ರವಾರ ಬೆಳಗ್ಗೆ ನಗರದ ಸರಕಾರಿ ಅತಿಥಿ ಗೃಹದ ಮುಂಭಾಗದಲ್ಲಿ ತಮ್ಮ ಪರಿಚಯಸ್ಥರೊಬ್ಬರ ಮೊಬೈಲ್‌ ಪಡೆದು ತಮ್ಮ ಹಾಡಿಗೆ ಸಬ್‌ ಸ್ಕ್ರೈಬ್ ಮಾಡುವ ವೇಳೆ ಅಲ್ಲಿಗೆ ಬಂದ ಯುವಕನೋರ್ವ ಈ ಕುರಿತು ಮಾಹಿತಿ ಕೇಳಿದ್ದಾನೆ. ರೋಹಿತ್‌ ತಾನು ಮೋದಿ ಕುರಿತು ಮಾಡಿರುವ ಹಾಡಿಗೆ ಸಬ್‌ ಸ್ಕ್ರೈಬ್ ಮಾಡುತ್ತಿರುವ ಬಗ್ಗೆ ಹೇಳಿದ್ದಾರಲ್ಲದೆ, ಆ ಹಾಡನ್ನು ಅಪರಿಚಿತ ಯುವಕನಿಗೆ ಕೇಳಿಸಿದ್ದಾನೆ. ಹಾಡು ಕೇಳಿದ ಯುವಕ, ಹಾಡು ಚೆನ್ನಾಗಿದ್ದು, ನನ್ನ ಗೆಳೆಯರು ಅತಿಥಿ ಗೃಹದ ಒಳಗಿದ್ದಾರೆ.

ಅವರ ಬಳಿಯೂ ಸಬ್‌ ಸ್ಕ್ರೈಬ್ ಮಾಡಿಕೊಡಿಸುವುದಾಗಿ ಹೇಳಿ ಅತಿಥಿ ಗೃಹದ ಆವರಣಕ್ಕೆ ಕರೆತಂದಿದ್ದಾನೆ. ಅಲ್ಲಿ ನಾಲ್ಕು ಜನರ ತಂಡ ರೋಹಿತ್‌ ಮೇಲೆ ಹಲ್ಲೆ ನಡೆಸಿದೆ. ಒಬ್ಬ ಬಿಯರ್‌ ಬಾಟಲಿಯಿಂದ ಹಲ್ಲೆ ಮಾಡಿದರೆ, ಇನ್ನೊಬ್ಬ ಸಿಗರೇಟ್‌ನಿಂದ ಸುಟ್ಟಿದ್ದಾನೆ. ಅಲ್ಲದೆ, ಅಲ್ಲಾ ಹೋ ಅಕºರ್‌ ಎಂದು ಕೂಗುವಂತೆ ಯುವಕರ ತಂಡ ಬಲವಂತ ಮಾಡಿದೆ. ರೋಹಿತ್‌ ಬಳಿಯಿದ್ದ ಶ್ರೀರಾಮನ ಭಾವಚಿತ್ರವಿರುವ ಕೇಸರಿ ಬಾವುಟವನ್ನು ಹರಿದು ಅದರ ಮೇಲೆ ಮೂತ್ರ ವಿಸ ರ್ಜನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ , ದುಷ್ಕರ್ಮಿಗಳ ತಂಡ ಪರಾರಿಯಾಗಿದೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next