Advertisement

ಅನುಭವದ ಕೊರತೆಯಿಂದ ಸೋಲು: ಗಾವಸ್ಕರ್‌

07:40 AM Jul 26, 2017 | Team Udayavani |

ಮುಂಬಯಿ: ವನಿತಾ ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ಸೋಲಿಗೆ ಅನುಭವದ ಕೊರತೆಯೇ ಮುಖ್ಯ ಕಾರಣ ಎಂಬುದಾಗಿ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಹೇಳಿದ್ದಾರೆ.

Advertisement

“ಭಾರತ ಈ ಪಂದ್ಯಾವಳಿ ಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿತು. ಆದರೆ ದೊಡ್ಡ ಪಂದ್ಯ ಗಳಲ್ಲಿ, ಅದರಲ್ಲೂ ವಿಶ್ವಕಪ್‌ ಫೈನಲ್‌ನಲ್ಲಿ ಆಡುವಾಗ ಅನುಭವ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರ ಕೊರತೆ ವನಿತೆಯರನ್ನು ಕಾಡಿತು…’ ಎಂಬುದಾಗಿ ಗಾವಸ್ಕರ್‌ ಅಭಿಪ್ರಾಯಪಟ್ಟರು.

“ಇದೊಂದು ಕ್ಲೋಸ್‌ ಮ್ಯಾಚ್‌ ಆಗಿತ್ತು. ನಮ್ಮವರು ಗರಿಷ್ಠ ಪ್ರಯತ್ನ ವನ್ನೇ ಮಾಡಿದ್ದರು. ಹೀಗಾಗಿ ಅವರಿಗೆ ಪೂರ್ಣಾಂಕ ನೀಡಬೇಕಾಗುತ್ತದೆ. ಈ ಪಂದ್ಯಾವಳಿಯಲ್ಲಿ ಮಿಥಾಲಿ ಟೀಮ್‌ ಆಡಿದ ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ…’ ಎಂದು ಗಾವಸ್ಕರ್‌ ಹೇಳಿದರು.

“ಹೌದು, ಭಾರತ ಕೊನೆಯ 7 ವಿಕೆಟ್‌ಗಳನ್ನು ಪಟಪಟನೆ ಕಳೆದು ಕೊಂಡಿತು. 20-30 ರನ್ನುಗಳ ಒಂದು ಜತೆಯಾಟ ನಡೆದರೂ ಭಾರತ ಮೇಲುಗೈ ಸಾಧಿಸುತ್ತಿತ್ತು. ಇದಕ್ಕೆ ಮುಖ್ಯವಾಗಿ ಬೇಕಿದ್ದುದು ಅನುಭವ…’ ಎಂದು ಸುನೀಲ್‌ ಗಾವಸ್ಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next