Advertisement

Subrahmanya ರಸ್ತೆಯಲ್ಲೇ ಸಾಗುತ್ತಿದೆ ಕಾಡುಕೋಣ ಹಿಂಡು !

11:37 PM Sep 17, 2023 | Team Udayavani |

ಸುಬ್ರಹ್ಮಣ್ಯ: ಬಳ್ಪದ ಕೇನ್ಯ ಗ್ರಾಮದ ವಿಷ್ಣುನಗರದ ಬಳಿ ಕಾಡುಕೋಣಗಳ ಹಿಂಡು ಪ್ರತೀ ದಿನ ದಾರಿಹೋಕರಿಗೆ ಕಾಣಸಿಗುತ್ತಿದ್ದು, ಇತ್ತೀಚೆಗಿನ ಕೆಲವು ದಿನಗಳಿಂದ ಜನರಿಗೆ ಹಾಯಲು ಬರುತ್ತಿರುವುದಾಗಿ ತಿಳಿದುಬಂದಿದೆ.

Advertisement

ಕೆಲವು ದಿನಗಳ ಹಿಂದೆ ಪಂಜ ಸಿ.ಎ. ಬ್ಯಾಂಕ್‌ ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ ಅವರು ದ್ವಿಚಕ್ರ ವಾಹನದಲ್ಲಿ ಈ ದಾರಿಯಲ್ಲಿ ಬರುತ್ತಿರುವಾಗ 10ಕ್ಕಿಂತಲೂ ಅಧಿಕ ಕಾಡುಕೋಣಗಳಿದ್ದ ಗುಂಪು ದಾಳಿಗೆ ಮುಂದಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರು ಈ ಬಗ್ಗೆ ಪಂಜ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇದೀಗ ಇಲಾಖಾ ಸಿಬಂದಿ ತಮ್ಮ ವಾಹನದಲ್ಲಿ ಬೆಳಗ್ಗೆ ಮತ್ತು ಸಂಜೆ ಶಾಲಾ ವಿದ್ಯಾರ್ಥಿಗಳು ಹೋಗುವ ಸಮಯದಲ್ಲಿ ಈ ಜಾಗದಲ್ಲಿ ಬಂದು ಮೊಕ್ಕಾಂ ಹೂಡಿದ್ದಾರೆ.

ಅರಣ್ಯ ಇಲಾಖಾ ಸಿಬಂದಿ ಹಲವು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದೆ. ಕಾಡುಕೋಣಗಳ ಹಿಂಡನ್ನು ಈ ಭಾಗದಿಂದ ಓಡಿಸಲು ಇಲಾಖೆಯ ಮೂಲಕ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next