Advertisement

ಗ್ಯಾಸ್ ಟ್ಯಾಂಕರ್ ಪಲ್ಟಿ: ವಾಹನ ಸಂಚಾರ ಅಸ್ತವ್ಯಸ್ತ; ವಿದ್ಯಾರ್ಥಿಗಳು, ಉದ್ಯೋಗಿಗಳ ಪರದಾಟ

10:31 AM Feb 02, 2021 | Team Udayavani |

ವಿಟ್ಲ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಮಸೀದಿ ಮುಂಭಾಗ ಗ್ಯಾಸ್ ಟ್ಯಾಂಕರ್ ರಸ್ತೆಗೆ ಉರುಳಿದ ಪರಿಣಾಮ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

Advertisement

ಮಾಣಿಯಿಂದ ಕೊಡಾಜೆ ಮೂಲಕ ಮಂಗಳಪದವು ಎಂಬಲ್ಲಿಗೆ ವಾಹನಗಳು ಬಂದು ಕಲ್ಲಡ್ಕ ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯಲ್ಲಿ ಕಲ್ಲಡ್ಕ ತಲುಪಿ, ಮಂಗಳೂರು ಕಡೆಗೆ ಸಂಚರಿಸುತ್ತಿದ್ದವು. ಮಾಣಿಯಿಂದ ಕಬಕ, ವಿಟ್ಲ, ಕಲ್ಲಡ್ಕ ಮಂಗಳೂರು, ಕೊಡಾಜೆ ವೀರಕಂಭ, ಕಲ್ಲಡ್ಕ ಮಂಗಳೂರು ಸಂಚಾರವೂ ಆಗುತ್ತಿತ್ತು. ಈ ಎಲ್ಲ ಒಳರಸ್ತೆಗಳು ಅಗಲಕಿರಿದಾಗಿದ್ದು ಆಗಾಗ ಬ್ಲಾಕ್ ಆಗುತ್ತಿವೆ.

ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಅನಿಲ ಕೊಂಡೊಯ್ಯುತ್ತಿದ್ದ ಎಲ್ಲಾ ಟ್ಯಾಂಕರ್ ಗಳನ್ನು ಮತ್ತು ಇತರ ಸಾಮಗ್ರಿಗಳನ್ನು ಒಯ್ಯುವ ಲಾರಿಗಳನ್ನು ಕಲ್ಲಡ್ಕ, ಮೆಲ್ಕಾರ್ ಮತ್ತು ಬಿಸಿರೋಡ್ ಮೊದಲಾದೆಡೆ ನಿಲ್ಲಿಸಲಾಗಿದೆ.

ಪರಿಣಾಮವಾಗಿ ಕಲ್ಲಡ್ಕದಿಂದ ಮಂಗಳೂರು ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದೆ. ಬೆಂಗಳೂರು ಕಡೆಯಿಂದ ಮಂಗಳೂರಿಗೆ ಲಾರಿಗಳೂ ಆಗಮಿಸದೇ ಇರುವುದರಿಂದ ಎಂದಿನಂತೆ ವಾಹನ ಜಂಜಾಟವಿರಲಿಲ್ಲ. ಬಸ್ಸು, ಖಾಸಗಿ ವಾಹನ ಮತ್ತು ದ್ವಿಚಕ್ರ, ರಿಕ್ಷಾ, ಕಾರುಗಳೇ ಸಂಚರಿಸುತ್ತಿದ್ದವು.

Advertisement

ಪುತ್ತೂರಿನಿಂದ ಮಂಗಳೂರಿಗೆ ಅಥವಾ ಮಂಗಳೂರಿನಿಂದ ಪುತ್ತೂರು, ಸುಳ್ಯ, ಉಪ್ಪಿನಂಗಡಿ ಕಡೆಗೆ ಖಾಸಗಿ, ಕೆಎಸ್ ಆರ್ ಟಿಸಿ ಬಸ್ ಸಂಚಾರವೂ  ಇಲ್ಲದೇ ಇದ್ದುದರಿಂದ ನಿತ್ಯ ಸಂಚಾರಿಗಳು ತೊಂದರೆಗೊಳಗಾದರು. ವಿದ್ಯಾರ್ಥಿಗಳು, ಉದ್ಯೋಗಿಗಳು ರಸ್ತೆಯ ಬದಿಯಲ್ಲಿ ನಿಂತು ಪರದಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next