Advertisement

ಗ್ಯಾಸ್‌ ಸೋರಿಕೆ: 3 ವರ್ಷಗಳಲ್ಲಿ 7 ಲಕ್ಷ ನಷ್ಟ

12:24 PM Sep 09, 2020 | Suhan S |

ಚಿಕ್ಕನಾಯಕನಹಳ್ಳಿ: ಇತ್ತೀಚಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ಗ್ಯಾಸ್‌ ಸ್ಟೌವ್‌ಗಳು ಬಳಕೆಯಾಗುತ್ತಿದ್ದು, ಅವುಗಳ ಅನುಕೂಲದ ಜೊತೆಗೆ ಅಪಾಯವು ಜೊತೆಯಲ್ಲಿಯೇ ಇದ್ದು, ಗ್ರಾಹಕರಿಗೆ ಮಾರ್ಗದರ್ಶನದ ಅವಶ್ಯಕತೆ ಅವಶ್ಯಕವಾಗಿದ್ದು, ಸಂಬಂಧಪಟ್ಟ ಇಲಾಖೆ, ಗ್ಯಾಸ್‌ ಏಜನ್ಸಿಗಳು ಜಾಗೃತಿ ಮೂಡಿಸಬೇಕಿದೆ.

Advertisement

ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಸುಮಾರು 7 ಲಕ್ಷ ರೂ. ನಷ್ಟವಾಗಿದೆ. 9 ಪ್ರಕರಣ ದಾಖಲಾಗಿದ್ದು ಇದರಲ್ಲಿ ಒಬ್ಬರು ಸಾವನಪ್ಪಿದ್ದಾರೆ. 2018 ರಲ್ಲಿ ಕಂದಿಕೆರೆ ಹೋಬಳಿಯಲ್ಲಿನ ಮದನಮಡು ಗ್ರಾಮ, ಕಿಬ್ಬನಹಳ್ಳಿಯ ಹಿಂಡಿಸ್ಕೆರೆ, ಹುಳಿಯಾರ್‌ ಹೋಬಳಿಯ ಕೊರಗೆರೆ, ಶೆಟ್ಟಿಕೆರೆ ಹೋಬಳಿಯ ಮಾಕುಹಳ್ಳಿ ಗ್ರಾಮಗಳಲ್ಲಿ ಗ್ಯಾಸ್‌ ಸೋರಿಕೆಯಿಂದ ಅನಾವುತ ಸಂಭವಿಸಿವೆ.

2019ರಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಚಿಕ್ಕನಾಯಕನಹಳ್ಳಿ ಪಟ್ಟಣದ ಬ್ರಾಹ್ಮಣ ಬೀದಿ, ಹುಳಿಯಾರ್‌ ಹೋಬಳಿಯ ಕಾರೇಹಳ್ಳಿ ಹಾಗೂ ದಾಸೂಡಿ ಗ್ರಾಮಗಳಲ್ಲಿ ಅನಾವುತ ಸಂಭವಿಸಿದೆ. 2020ರಲ್ಲಿ ಇದುವರೆಗೆ 2ಪ್ರಕರಣ ದಾಖಲಾಗಿದ್ದು ಬುಳ್ಳೆನಹಳ್ಳಿ ಹಾಗೂ ದೊಡ್ಡಬಿದರೆಯಲ್ಲಿ ಗ್ಯಾಸ್‌ ಸೋರಿಕೆಯಿಂದ ನಷ್ಟ ಉಂಟಾಗಿದೆ.ಗ್ಯಾಸ್‌ ಸೋರಿಕೆಯಿಂದಲೇ ಅನಾಹುತ: 3 ವರ್ಷಗಳಲ್ಲಿ ಸುಮಾರು 7 ಲಕ್ಷ ಗ್ಯಾಸ್‌ ಸೋರಿಕೆಯಿಂದ ನಷ್ಟ ಉಂಟಾಗಿದೆ ಹಾಗೂ ಆಗ್ನಿ ಶಾಮಕ ದಳದವರ ಸಮಯ ಪ್ರಜ್ಞೆಯಿಂದ ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ತಪ್ಪಿದ್ದಂತಾಗಿದೆ. ಗುಣಮಟ್ಟದ ಪೈಪ್‌ ಹಾಗೂ ರೆಗ್ಯುಲೇಟರ್‌ಗಳ ಬಗ್ಗೆ ಗ್ರಾಹಕರಿಗೆ ಗ್ಯಾಸ್‌ ಏಜೆನ್ಸಿಗಳು ಮಾಹಿತಿ ನೀಡಬೇಕಾಗಿದೆ.

ತಡೆಗಟ್ಟುವ ವಿಧಾನ: ಎರಡು ವರ್ಷಗಳಿಗೊಮ್ಮೆ ರೆಗ್ಯೂಲೆಟರ್‌ ಹಾಗೂ ಲೈಪ್‌ ಬದಲಾಯಿಸಬೇಕು, ಗ್ಯಾಸ್‌ ಉಪಯೋಗಿ ಸುವಾಗ ಪಾಲಿಸ್ಟರ್‌, ಲೈಲಾನ್‌ ಬಟ್ಟೆಗಳನ್ನು ಬಳಸಬಾ ರದು, ಗ್ಯಾಸ್‌ ಲೀಕ್‌ ಆದ ವೇಳೆ ವಿದ್ಯುತ್‌ ಲೈಟ್‌ ಆಫ್-ಆನ್‌ ಮಾಡ  ಬಾರದು. ಯತಾಸ್ಥಿತಿ ಕಾಯ್ದುಕೊಳ್ಳಬೇಕು, ಎಲ್‌ಪಿಜಿ ಗ್ಯಾಸ್‌ ಗಾಳಿ ಗಿಂತ ಭಾರ ಹಾಗೂ ನೀರಿಗಿಂತ ಹಗುರ ವಾಗಿ ರುವುದರಿಂದ ಲೀಕ್‌ ಆದ ಗ್ಯಾಸ್‌ ನೆಲಭಾಗದಲ್ಲಿ ಇರುತ್ತದೆ. ಕಿಟಕಿ ಬಾಗಿಲುಗಳನ್ನು ತೆಗೆಯಬೇಕು, ಅಡಿಗೆ ಮುಗಿದ ನಂತರ ರೆಗ್ಯುಲೇಟರ್‌ ಆಫ್ ಮಾಡಬೇಕು, ಗ್ಯಾಸ್‌ ಸೋರಿಕೆ ಯಾದ ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಬೇಕು (08133-267305) ಎಂದುಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ದಳ ಠಾಣಾಧಿಕಾರಿ ಹನುಮಂತರಾಜ್‌ ತಿಳಿಸಿದ್ದಾರೆ.

 

Advertisement

  ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next