Advertisement
ಕಳೆದ ವರ್ಷ ಈ ಯೋಜನೆ ಆರಂಭಿಸುವ ಬಗ್ಗೆ ಕೆಪಿಟಿಸಿಎಲ್(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ನಿರ್ಧರಿಸಿತ್ತಾದರೂ ಈ ಬಗ್ಗೆ ಅಂತಿಮ ಕಾರ್ಯರೂಪ ಇನ್ನೂ ಸಿದ್ಧವಾಗಿಲ್ಲ. ಆದರೆ ಯೋಜನೆ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದ್ದು, ಟೆಂಡರ್ ಪ್ರಕ್ರಿಯೆ ಬೇಗನೆ ಆಗಲಿದೆ ಎಂದು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ.
ಬಳಿಕ ಜಿಎಸ್ಟಿ ಸಹಿತ ವಿವಿಧ ವಿಚಾರಗಳ ಪ್ರಶ್ನೆಗಳೊಂದಿಗೆ ಕಡತ ಕಚೇರಿಯಿಂದ ಕಚೇರಿಗೆ ಬದಲಾವಣೆಯಾಗಿದೆ. 10.5 ಕಿ.ಮೀ.ಉದ್ದದ ಭೂಗತ ಕೇಬಲ್
ಕೆಪಿಟಿಸಿಎಲ್ನ ಕಾವೂರಿನಲ್ಲಿರುವ 220 ಕೆ.ವಿ. ಶರಾವತಿ ವಿದ್ಯುತ್ ಸ್ವೀಕರಣ ಕೇಂದ್ರದಿಂದ ಜಿಲ್ಲೆಯ ಬೇರೆ ಬೇರೆ ಭಾಗದ ಮೆಸ್ಕಾಂ ಸಬ್ಸ್ಟೇಶನ್ಗೆ ವಿದ್ಯುತ್ ಸರಬರಾಜಾಗುತ್ತದೆ. ಇದರಂತೆ ನೆಹರೂ ಮೈದಾನದ ಪಕ್ಕದ ಸಬ್ಸ್ಟೇಶನ್ಗೆ ವಿದ್ಯುತ್ ಸರಬರಾಜಾಗುತ್ತಿದೆ. ಇಲ್ಲಿ ನೂತನ ಜಿಐಎಸ್ ಸ್ಟೇಶನ್ ಆಗುವ ವೇಳೆಯಲ್ಲಿ ಈಗಿರುವ ಲೈನ್ ಅನ್ನು ಬದಲಿಸಿ ಭೂಗತ ಕೇಬಲ್ ಅಳವಡಿಸಲಾಗುತ್ತದೆ. ಕಾವೂರಿನಿಂದ ಪದವಿನಂಗಡಿ, ನಂತೂರು, ಮಲ್ಲಿಕಟ್ಟೆ, ಜ್ಯೋತಿ, ಹಂಪನಕಟ್ಟೆ ಆಗಿ ಸ್ಟೇಟ್ಬ್ಯಾಂಕ್ ಬಸ್ನಿಲ್ದಾಣ ಭಾಗದಿಂದ ಸುಮಾರು 10.5 ಕಿ.ಮೀ. ಉದ್ದದ ಭೂಗತ ಕೇಬಲ್ ಅಳವಡಿಸುವ ಬಗ್ಗೆ ಕೆಪಿಟಿಸಿಎಲ್ ಸರ್ವೆ ನಡೆಸಿದೆ. ಸಬ್ ಸ್ಟೇಶನ್ ರಚನೆಗೆ ಜರ್ಮನ್ನಿಂದ ಉಪಕರಣಗಳು ಆಮದು ಆಗಲಿದೆ ಎಂದು ಮೂಲಗಳು ತಿಳಿಸಿವೆ.
Related Articles
ಜಪಾನಿನಲ್ಲಿ ಪ್ರಥಮವಾಗಿ ಗ್ಯಾಸ್ ಇನ್ಸುಲೇಟೆಡ್ ವಿಧಾನ ಮೊದಲಿಗೆ ಅಭಿವೃದ್ಧಿªಪಡಿಸಲಾಗಿತ್ತು. ಹೈ ವೋಲ್ಟೆಜ್ ವಿದ್ಯುತ್ ಪ್ರಸರಣದ ಪ್ರಮುಖ ರಚನೆಗಳನ್ನು ಕಿರಿ ದಾಗಿಸಿ, ಸಲರ್ ಹೆಕ್ಸಾಫೂರಿಡ್ ಗ್ಯಾಸ್ ಕವಚದಲ್ಲಿ ಮುಚ್ಚಿಡುವ ವಿಧಾನವಾಗಿದೆ. ಬ್ರೇಕರ್, ಟ್ರಾನ್ಫಾರ್ಮರ್ ಯಾರ್ಡ್ ಸಣ್ಣ ಕಂಟ್ರೋಲ್ ರೂಂನಿಂದ ಇದನ್ನು ನಿಯಂತ್ರಿಸಬಹುದು. ಸಾಮಾನ್ಯವಾಗಿ 110 ಕೆ.ವಿ.ಸಬ್ ಸ್ಟೇಶನ್ಗೆ 100 ಚದರ ಮೀ. ನಷ್ಟು ಜಾಗದ ಅಗತ್ಯವಿದ್ದರೆ, ಜಿಐಎಸ್ ಸಬ್ ಸ್ಟೇಶನ್ಗೆ ಕೇವಲ 30 ಚದರ ಮೀ. ಜಾಗ ಸಾಕಾಗುತ್ತದೆ. ಇದರ ನಿರ್ಮಾಣ ವೆಚ್ಚ ದುಬಾರಿಯಾದರೂ ಆದರೆ ನಿರ್ವಹಣೆ ಸರಳ, ಹೆಚ್ಚು ಹಣ ವ್ಯಯವಾಗುವುದಿಲ್ಲ. ನೆಹರೂ ಮೈದಾನದ ಪಕ್ಕದ ಈಗಿನ ಸಬ್ಸ್ಟೇಶನ್ನಲ್ಲಿ 5 ಎಂ.ವಿ.ಎ ಸಾಮ ರ್ಥ್ಯದ 2 ಟ್ರಾನ್ಸ್ ಫಾರ್ಮರ್ ಸದ್ಯ ಬಳಕೆಯಲ್ಲಿದ್ದರೆ, ಮುಂದೆ ಹೊಸ ಸ್ಟೇಶನ್ನಲ್ಲಿ 20 ಎಂ.ವಿ.ಎ. ಸಾಮರ್ಥ್ಯದ 3 ಟ್ರಾನ್ಸ್ ಫಾರ್ಮರ್ಗಳು ಬರಲಿದೆ. ಈ ಮೂಲಕ ವಿದ್ಯುತ್ ಒತ್ತಡ ಕಡಿಮೆಯಾಗಿ ವಿದ್ಯುತ್ ಹಂಚಿಕೆ ಸುಲಭವಾಗಲಿದೆ.
Advertisement