Advertisement

ಗಾಣಿಗ ಜ್ಯೋತಿ ಭವನ ಕಾಂಪೌಂಡ್‌ ಕಾಮಗಾರಿಗೆ ಸವದಿ ಚಾಲನೆ

11:08 AM May 29, 2020 | Suhan S |

ಮಹಾಲಿಂಗಪುರ: ಪಟ್ಟಣದ 7ನೇ ವಾರ್ಡ್‌ನಲ್ಲಿರುವ ಗಾಣಿಗೇರ ಸಮಾಜದ ನೂತನ ಗಾಣಿಗಜ್ಯೋತಿ ಸಮುದಾಯ ಭವನದ ಕಾಂಪೌಂಡ್‌ ಕಾಮಗಾರಿಗೆ ತೇರದಾಳ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.

Advertisement

ಕಾಮಗಾರಿಗೆ ಚಾಲನೆ ನೀಡಿದ ಮಾತನಾಡಿದ ಶಾಸಕ ಸಿದ್ದು ಸವದಿ, ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ 7 ಲಕ್ಷ ವೆಚ್ಚದಲ್ಲಿ ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಜತೆಗೆ ಕಾಮಗಾರಿ ನಡೆಯುವಾಗ ಹಿರಿಯರು, ಯುವಕರು ಕಾಳಜಿ ವಹಿಸಿ ಗುಣಮಟ್ಟದ ಕಾಂಪೌಂಡ್‌ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ತೇರದಾಳ ಮತಕ್ಷೇತ್ರ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ರನ್ನ ಶುಗರ್ ಉಪಾಧ್ಯಕ್ಷ ಅಶೋಕಗೌಡ ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ಮಹಾಲಿಂಗ ಕುಳ್ಳೋಳ್ಳಿ, ವಾರ್ಡ್‌ ಸದಸ್ಯ ರವಿ ಜವಳಗಿ, ಗಾಣಿಗ ಸಮಾಜದ ಅಧ್ಯಕ್ಷ ಬಸನಗೌಡ ಗೋಲಪ್ಪನವರ, ಅಧ್ಯಕ್ಷ ಸಂಗಪ್ಪ ಉಪ್ಪಲದಿನ್ನಿ, ಮಹಾಲಿಂಗ ಕಲಾಗತಿ, ಶಂಕರ ಆದೆಪ್ಪನವರ, ಹನಮಂತ ತೇಲಿ, ಈಶ್ವರ ಆದೆಪ್ಪನವರ, ಮುರಿಗೆಪ್ಪ ಅಟಗಾಳಿ, ಶಿವಪ್ಪ ಆದೆಪ್ಪನವರ, ಬೈರೇಶ ಆದೆಪ್ಪನವರ, ಸುಭಾಸ ಹುಕ್ಕೇರಿ, ಜಿ.ಜಿ.ಗಾಣಗೇರ, ಅಶೋಕ ಗುಡ್ಲಿ, ಹನಮಂತ ಕೊಣ್ಣುರ, ಬಿಜೆಪಿ ಮುಖಂಡರಾದ ಚನ್ನಪ್ಪ ರಾಮೋಜಿ, ಜಮೀರ ಯಕ್ಸಂಬಿ, ಅರ್ಜುನ ಪವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next