Advertisement

Gangolli: ಮಹಿಳೆ ಕೆರೆಗೆ ಬಿದ್ದು ಸಾವು

11:49 PM Aug 04, 2024 | Team Udayavani |

ಗಂಗೊಳ್ಳಿ: ಹೊಸಾಡು ಗ್ರಾಮದ ಕೃಷಿಕೆ ಕುಂಬ್ರಿ ದೇವಿ (68) ಅವರು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಮನೆಯ ದನಗಳಿಗೆ ಹಸಿ ಹುಲ್ಲು ಸೊಪ್ಪುಗಳನ್ನು ತರಲು ಮನೆಯ ಅಕ್ಕ ಪಕ್ಕದ ಪ್ರದೇಶಗಳಿಗೆ ಹೋಗುತ್ತಿದ್ದು ಸಣ್ಣಕುಂಬ್ರಿಯ ಸರಕಾರಿ ಜಾಗ ದಲ್ಲಿರುವ ಕೆರೆಯಲ್ಲಿ ನಡೆದು ಕೊಂಡು ಹೋಗುತ್ತಿರುವಾಗ ಆಕಸ್ಮಿಕ ವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಉಸಿರುಗಟ್ಟಿ ಮೃತ ಪಟ್ಟಿ ದ್ದಾರೆ. ಮೃತರ ಪುತ್ರ ಪ್ರದೀಪ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

ಮಲ್ಪೆ : ವ್ಯಕ್ತಿ ಮಲಗಿದಲ್ಲೇ ಸಾವು
ಮಲ್ಪೆ: ಇಲ್ಲಿನ ಬಸ್‌ ನಿಲ್ದಾಣದ ಪಕ್ಕ ಮಲಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಆ. 2ರಂದು ಬೆಳಕಿಗೆ ಬಂದಿದೆ. ತಮಿಳುನಾಡಿನ ಕೋಟೆಪಲ್ಲಿನಮ್‌ನ ನೈನಾ ಮೊಹಮ್ಮದ್‌ (47) ಮೃತರು. ಅವರು 2 ವರ್ಷಗಳ ಹಿಂದೆ ಮಲ್ಪೆಗೆ ಬಂದಿದ್ದು, ಕೂಲಿ ಕೆಲಸ ಮಾಡಿ ಕೊಂಡಿದರ್ಧು. ವಿಪರೀತ ಕುಡಿ ಯುವ ಚಟ ಹೊಂದಿದ್ದ ಅವರು ಮಲ್ಪೆ ಪರಿಸರದಲ್ಲೇ ಮಲ ಗುತ್ತಿದ್ದರು. ಸಮಾಜ ಸೇವಕ ಈಶ್ವರ ಮಲ್ಪೆ ಅವರು ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next