Advertisement

Gangolli ಅರಾಟೆ : ವಿದ್ಯುತ್‌ ಆಘಾತದಿಂದ ಸಾವು

10:08 PM Jul 10, 2024 | Team Udayavani |

ಗಂಗೊಳ್ಳಿ: ವಿಪರೀತ ಮಳೆಗೆ ವಿದ್ಯುತ್‌ ವಯರಿಗೆ ನೀರು ತಾಗಿ, ಆಘಾತಕ್ಕೊಳಗಾಗಿ ಉತ್ತರ ಪ್ರದೇಶ ಮೂಲದ ಪಂಕಜ್‌ ಸಾಹು (23) ಅವರು ಸಾವನ್ನಪ್ಪಿದ ಘಟನೆ ಮುಳ್ಳಿಕಟ್ಟೆಯ ಅರಾಟೆಯಲ್ಲಿ ಜು.9ರಂದು ರಾತ್ರಿ 10.30ರ ಸುಮಾರಿಗೆ ಸಂಭವಿಸಿದೆ.

Advertisement

ಇವರು ಮುಳ್ಳಿಕಟ್ಟೆಯ ಅರಾಟೆಯಲ್ಲಿ ಪ್ರಕಾಶ್‌ ಆಚಾರ್ಯ ಅವರ ಬೋಟ್‌ ಬಿಲ್ಡಿಂಗ್‌ನಲ್ಲಿ ಸ್ನೇಹಿತರಾದ ಅಮಿತ್‌ ಎನ್‌. ವರ್ಮಾ, ಮನೋಜ್‌ ಬಿಂದ್‌ ಜತೆಗೆ ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದು, ಅರಾಟೆಯ ಮನೆಯಲ್ಲಿ ಉಳಿದುಕೊಂಡಿದ್ದರು. ಆ ಮನೆಯ ಹೊರಗೆ ಬೆಳಕಿನ ವ್ಯವಸ್ಥೆ ಇರಲಿಲ್ಲ.

ಜು. 9ರ ರಾತ್ರಿ ಊಟ ಮಾಡಿ ಬಟ್ಟಲು ತೊಳೆಯಲು ಹೊರಗೆ ಹೋಗಿದ್ದು, ಆಗ ವಯರಿಗೆ ಬಲ್ಬನ್ನು (ವೋಲ್ಟರ್‌ ಮೂಲಕ) ಹಾಕಿಕೊಂಡು ಪ್ಲಗ್ಗಿಗೆ ಸಿಕ್ಕಿಸಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವಾಗ ವಿಪರೀತ ಮಳೆಗೆ ವಯರಿಗೆ ನೀರು ತಾಗಿ, ವಿದ್ಯುತ್‌ ಶಾಕ್‌ ಹೊಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next