Advertisement

ಗಂಗಾವತಿ: ನಗರಸಭೆ ಉಪಾಧ್ಯಕ್ಷೆ ಸುಧಾ ಸೋಮನಾಥ ಸದಸ್ಯತ್ವ ಅನರ್ಹತೆಗೆ ತಡೆ ನೀಡಿದ ಹೈಕೋರ್ಟ್

09:52 AM Feb 17, 2023 | Team Udayavani |

ಗಂಗಾವತಿ: ನಗರಸಭೆಯ ಉಪಾಧ್ಯಕ್ಷೆ, 26ನೇ ವಾರ್ಡಿನ ಸದಸ್ಯೆ ಸುಧಾ ಸೋಮನಾಥ ಕಂಪ್ಲಿ ಅವರ ಸದಸ್ಯತ್ವ ಅನರ್ಹಗೊಳಿಸಿದ್ದ ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶಕ್ಕೆ ಧಾರವಾಡದ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

Advertisement

ನಗರಸಭೆಯ 26ನೇ ವಾರ್ಡ್ ಸದಸ್ಯೆ ಸುಧಾ ಅವರನ್ನು ನಗರಸಭೆಯ ಅಧ್ಯಕ್ಷರ ಆಯ್ಕೆಯ‌ ಚುನಾವಣೆ ಸಂದರ್ಭದಲ್ಲಿ ಬಿಜೆಪಿ‌ ಪಕ್ಷ ನೀಡಿದ್ದ ವಿಫ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಗಂಗಾವತಿ ಸ್ಥಳಿಯ ಬಿಜೆಪಿ ಮುಖಂಡರ ಮನವಿಯ ಮೇರೆಗೆ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ನಿಯಮದಡಿಯಲ್ಲಿ ಆಗಿನ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸೂರಳ್ಕರ್ ಅವರಿಗೆ ಸುಧಾ ಅವರ ಸದಸ್ಯತ್ವ ರದ್ದು ಮಾಡುವಂತೆ ದೂರು ನೀಡಿದ್ದರು.

ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಕಳೆದ 2022ರ ಮೇ 11ರಂದು ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದರು. ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಸುಧಾ ಸೋಮನಾಥ ಧಾರವಾಡ ಹೈ ಕೋರ್ಟ್ ಮೊರೆ ಹೋಗಿದ್ದರು.

ಸುಧೀರ್ಘ ವಿಚಾರಣೆ ನಂತರ ಹೈಕೋರ್ಟ್ ವಿಚಾರಣೆ ಕಾಯ್ದಿರಿಸಿ, ತಡೆ ನೀಡಿದ್ದು, ಸುಧಾ ಸೋಮನಾಥ ಅವರಿಗೆ ಬಿಗ್ ರಿಲೀಫ್ ನೀಡಿದೆ.‌

Advertisement

Udayavani is now on Telegram. Click here to join our channel and stay updated with the latest news.

Next