Advertisement

ತಾ.ಪಂ.ಸದಸ್ಯನ ನೇತೃತ್ವದಲ್ಲಿ ದಾಳಿ ನಡೆಸಿ ಅಪ್ರಾಪ್ತ ಬಾಲಕಿ ವಿವಾಹ ತಡೆದ ಸಿಡಿಪಿಒ

03:02 PM May 02, 2020 | keerthan |

ಗಂಗಾವತಿ: ಶಿಶು ಅಭಿವೃದ್ದಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಿಯ ತಾಲೂಕು ಪಂಚಾಯತ್ ಸದಸ್ಯ ಶಂಭಣ್ಣ ಇವರ ನೇತೃತ್ವದಲ್ಲಿ ದಾಳಿ ನಡೆಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮದುವೆಯನ್ನು ತಡೆಯಲಾಗಿದೆ.

Advertisement

ತಾಲೂಕಿನ ಹಣವಾಳ ಗ್ರಾಮದಲ್ಲಿ ಘಟನೆ ನಡೆದಿದ್ದು,  ಅಪ್ರಾಪ್ತ ಬಾಲಕಿಯೊರ್ವಳ ಮದುವೆಯ ಬಗ್ಗೆ ಖಚಿತ ಮಾಹಿತಿ ಪಡೆದು ಅಧಿಕಾರಿಗಳು ಆಕೆಯು ಮನೆಗೆ ಭೇಟಿ ನೀಡಿದರು. ಈ ಬಾಲಕಿಗೂ ಸಿಂಧನೂರು ತಾಲೂಕಿನ ಚನ್ನಳ್ಳಿ ಗ್ರಾಮದ ಯುವಕನೊರ್ವನಿಗೆ ಕೊಟ್ಟು ಮದುವೆ ಮಾಡುವ ಕುರಿತು ಮಾತುಕತೆಯಾಗಿತ್ತು. ಮನೆಗೆ ತೆರಳಿದ ಅಧಿಕಾರಿಗಳು, ಬಾಲಕಿ ಪ್ರಾಪ್ತ ವಯಸ್ಸು ಬರುವ ತನಕ ಮದುವೆ ಮಾಡದಂತೆ ಪಾಲಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಲಕರಿಗೆ ತಿಳುವಳಿಕೆ ಹೇಳಿ ಮದುವೆ ಮಾಡುವುದಿಲ್ಲ ಎಂದು ಪಾಲಕರು ಮುಚ್ಚಳಿಕೆ ಬರೆದುಕೊಟ್ಡಿದ್ದಾರೆ.

ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಗಂಗಪ್ಪ ಆರೋಲ್, ಪೊಲೀಸ್ ಇಲಾಖೆಯ ಮಲ್ಲೇಶಪ್ಪ ಗ್ರಾ.ಪಂ ಸಿಬ್ಬಂದಿ ವರ್ಗದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next