Advertisement

Gangavathi: ವಿದ್ಯುತ್ ಕಂಬದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಬೀದಿ ದೀಪ

02:44 PM Jul 25, 2023 | Team Udayavani |

ಗಂಗಾವತಿ: ಸತತ ಮಳೆಯಿಂದಾಗಿ ನಗರದ  ವಾರ್ಡ್ 27 ಹರಿಜನವಾಡದ ಬೀದಿ ದೀಪದ ಲೈಟ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡು ಹಾಲೋಜೇನ್ ಲೈಟ್ ಹೊತ್ತಿಉರಿದಿದೆ.

Advertisement

ಸತತ ಮಳೆ ಪರಿಣಾಮ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಅವಘಡ ಸಾಮಾನ್ಯವಾಗಿದ್ದು, ಹರಿಜನವಾಡದ ಬೀದಿ ದೀಪದ ಕಂಬಗಳಲ್ಲಿ ವೈರ್‌ ಜೋಡಣೆ ಅಡ್ಡಾದಿಡ್ಡಿಯಾಗಿರುವುದರಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಗಾಬರಿಗೊಂಡಿದ್ದು, ಕೂಡಲೇ ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ವಿದ್ಯುತ್ ಕಡಿತಗೊಳಿಸಿ ದುರಸ್ಥಿ ಮಾಡಿ ಸರಿಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next