Advertisement

ಗಂಗಾಧರ ಹತ್ಯೆ: ಪಿಎಸ್‌ಐ ಸೇರಿ 6 ಆರೋಪಿಗಳು ನ್ಯಾಯಾಂಗ ವಶಕ್ಕೆ

06:55 AM Jun 23, 2018 | |

ವಿಜಯಪುರ: ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಿಂದ ತಮ್ಮ ವಶಕ್ಕೆ ಪಡೆದಿದ್ದ 6 ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮರಳಿ ನ್ಯಾಯಾಂಗ ಬಂಧನಕ್ಕೆ ಅವರನ್ನು ಕಳಿಸಲಾಗಿದೆ.

Advertisement

ಜೂ.19ರಂದು ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಸಿಐಡಿ ತಂಡ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿತ್ತು.

ಇಂಡಿ ಜೆಎಂಎಫ್‌ಸಿ ನ್ಯಾಯಾಲಯವು ಪ್ರಕರಣ ಆರೋಪಿ ಚಡಚಣ ಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ
ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯೊRàಡಿ, ಸಿದಾಟಛಿರೂಢ ರೂಗಿ, ಹತ್ಯೆ ಮಾಡಿದ ಆರೋಪಿಗಳಾದ ಹನುಮಂತ ಪೂಜಾರಿ ಹಾಗೂ ಸಿದ್ದಗೊಂಡ ತಿಕ್ಕುಂಡಿ ಅವರನ್ನು ಸಿಐಡಿ ವಶಕ್ಕೆ ನೀಡಿತ್ತು. ಪ್ರಕರಣ ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ಹೆಚ್ಚಿನ ವಿಚಾರಣೆಗೆ ಜೂ.23ರವರೆಗೆ ವಶಕ್ಕೆ ನೀಡಿತ್ತು. ಆದರೆ, ತಮ್ಮ ವಶದಲ್ಲಿ
ಇರಿಸಿಕೊಳ್ಳಲು ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅವರನ್ನು
ಹಾಜರುಪಡಿಸಿದರು.

25 ಜೀವಂತ ಗುಂಡು ಪತ್ತೆ: ಗಂಗಾಧರ ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ
ಮಹಾದೇವ ಭೈರಗೊಂಡನ ಮನೆಯಲ್ಲಿ 25 ಜೀವಂತ ಗುಂಡುಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next