Advertisement

ಭಾರತದಲ್ಲಿ  ಗಣೇಶೋತ್ಸವದ ವ್ಯಯ 1,200 ಕೋಟಿ ರೂ.

07:15 AM Aug 30, 2017 | Team Udayavani |

ಸಿದ್ದಾಪುರ: ಸ್ವಾತಂತ್ರ ಪೂರ್ವದಲ್ಲೆ ಬಾಲಗಂಗಾಧರ ತಿಲಕರು ಜನರ ಒಗ್ಗೂಡುವಿಕೆಗೆ ಭಾವನಾತ್ಮಕವಾಗಿ ಗಣೇಶೋತ್ಸವ ಆಚರಣೆಗಳನ್ನು ಪ್ರಾರಂಭಿಸಿದ್ದರು. ಅಂದು ಆರಂಭಿಸಿದ ಗಣೇಶೋತ್ಸವಗಳು ಇತ್ತೀಚಿನ ದಿನಗಳಲ್ಲಿ ಅಂಕಿ ಅಂಶಗಳ ಪ್ರಕಾರ ಭಾರತ ದೇಶದಲ್ಲಿ ಒಟ್ಟು 28 ಸಾವಿರದಷ್ಟು ಗಣೇಶೋತ್ಸವಗಳು ನಡೆಯುತ್ತವೆ. ಇದರ ಒಟ್ಟು ವ್ಯಯ ರೂ. 1,200 ಕೋಟಿಯಾಗಿವೆ. ಗಣೇಶೋತ್ಸವಗಳ ಮೂಲಕ ಧಾರ್ಮಿಕ ಹಾಗೂ ಆರ್ಥಿಕ ಹರಿಯು ಹೆಚ್ಚಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರು ಹೇಳಿದರು.

Advertisement

ಅವರು ಅಂಪಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ 19ನೇ ವರ್ಷದ ಅಂಪಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಿದ್ಯಾರ್ಥಿ ವೇತನ, ಬಹುಮಾನ ವಿತರಣೆ, ಅಸಕ್ತರಿಗೆ ಸಹಾಯ ಧನ ವಿತರಣೆ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು.

ಶ್ರೀ ಗಣೇಶೋತ್ಸವವು ಹಳ್ಳಿ ಹಳ್ಳಿಗಳಲ್ಲಿಯೂ ಆಚರಣೆ ಮಾಡುವ ಮೂಲಕ, ಸಾರ್ವಜನಿಕರಲ್ಲಿ ಶಾಂತಿ, ಸಹನೆ, ಸಹಬಾಳ್ವೆ ಮೂಡಿಸುತ್ತಿದೆ. ಸಮಿತಿಗಳು ಧಾರ್ಮಿಕ ಕಾರ್ಯಗಳ ಮೂಲಕ ಸಮಾಜ ಸೇವೆ ಮಾಡುತ್ತಿವೆ. ಭಾರತವನ್ನು ಜಗತ್ತು ಕೊಂಡಾಡುವುದು ವೈವಿಧ್ಯದಿಂದಾಗಿದೆ. ಏಕತೆ ಎನ್ನುವುದು ಒಂದು ಭಾವನೆ. ವೈವಿಧ್ಯದಲ್ಲಿರುವ ಭಾವನೆಯನ್ನು ಒಗ್ಗೂಡಿಸುವುದು ಏಕತೆಯಾಗಿದೆ ಎಂದರು.

ಪ್ರಗತಿಪರ ಕೃಷಿಕ ಚಂದ್ರಶೇಖರ ಶೆಟ್ಟಿ ನಿರ್‌ಕೋಡ್ಲು ಅವರು ಪಿಯುಸಿ ಹಾಗೂ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಿ, ಶುಭಹಾರೈಸಿದರು.

ಅಂಪಾರು ರೋಟರಿ ಕ್ಲಬ್‌ ಅಧ್ಯಕ್ಷ ತೇಜಪ್ಪ ಶೆಟ್ಟಿ ಅವರು ಆಟೋಟ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವೆಂಕಟ್ರಾಯ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಹಕಾರಿಸಿದವರನ್ನು ಸ್ಮರಿಸಿದರು.

Advertisement

ಮುಖ್ಯ ಅತಿಥಿಗಳಾಗಿ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ. ಗಣಪಯ್ಯ ಶೆಟ್ಟಿ ಕುಪ್ಪುಗೋಡು, ಕೆ. ಪ್ರಭಾಕರ ಹೆಗ್ಡೆ, ಉದ್ಯಮಿ ಸುಕುಮಾರ ವೈದ್ಯ, ಅಂಪಾರು ಗ್ರಾ.ಪಂ. ಉಪಾಧ್ಯಕ್ಷ ಕಿರಣ್‌ ಹೆಗ್ಡೆ, ಪ್ರಧಾನ ಆರ್ಚಕ ಶ್ಯಾಮರಾಜ್‌ ಭಟ್‌, ಸಮಿತಿ ಪ್ರಧಾನ ಕಾರ್ಯದರ್ಶಿ ಗಣಪತಿ ಕುಲಾಲ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ  ಉಪಸ್ಥಿತರಿದ್ದರು.

ಈ ಸಂದರ್ಭ ಗಣೇಶೋತ್ಸವ ಸಮಿತಿಯು 2016- 17ನೇ ಸಾಲಿನ ಶೈಕ್ಷಣಿಕ ವರ್ಷದ ಪಿಯುಸಿ ಹಾಗೂ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ 34 ವಿದ್ಯಾರ್ಥಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು. ಅಶಕ್ತ ಕುಟುಂಬಕ್ಕೆ ಸಹಾಯಧನ ವಿತರಣೆ ಮಾಡಲಾಯಿತು.

ಸಂಘಟನಾ ಕಾರ್ಯದರ್ಶಿ ಉಮೇಶ್‌ ಕೊಠಾರಿ ಸ್ವಾಗತಿಸಿದರು. ಸಂಘಟನ ಅಧ್ಯಕ್ಷ ಎಚ್‌. ಮನೋಹರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್‌ ಶೆಟ್ಟಿ ಕಂಚಾರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next