Advertisement

ಕಾಮಿಡಿ ಕಿಲಾಡಿಗಳ ಜೊತೆ ಗಣೇಶ್‌

09:35 AM Sep 22, 2019 | Lakshmi GovindaRaju |

ನಟ ಗಣೇಶ್‌ ಕಿರುತೆರೆಯಿಂದ ಬಂದವರು. ಈಗ ಮತ್ತೆ ಕಿರುತೆರೆಗೆ ವಾಪಾಸ್‌ ಆಗಿದ್ದಾರೆ. ಹಾಗಂತ ಅವರು ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಕಾಮಿಡಿ ಕಿಲಾಡಿಗಳು- ಸೀಸನ್‌ 3’ಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ.

Advertisement

ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಗಣೇಶ್‌ ಮುಂದೆ ಪ್ರದರ್ಶಿಸಿದ್ದು, ಗಣೇಶ್‌ ಕೂಡಾ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ಅವರ ಮುಂದಿನ ಭವಿಷ್ಯಕ್ಕೂ ಶುಭಕೋರಿದ್ದಾರೆ. ಈ ಎಪಿಸೋಡ್‌ ಇದೇ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಗಣೇಶ್‌ ಜೊತೆ ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ನಟ ಜಗ್ಗೇಶ್‌ ತೀರ್ಪುಗಾರರಾಗಿದ್ದರು.

ಸದ್ಯ ಗಣೇಶ್‌ ನಟನೆಯ “ಗೀತಾ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಸೆ.27 ರಂದು ಬಿಡುಗಡೆಯಾಗುತ್ತದೆ. ಈ ಚಿತ್ರದ ಪ್ರಮೋಶನ್‌ ಕಾರ್ಯದಲ್ಲಿ ಬಿಝಿಯಾಗಿರುವ ಗಣೇಶ್‌, ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next