Advertisement

ಗಣೇಶ್‌ ಹೊಸ ಚಿತ್ರ ಆರೆಂಜ್‌

11:02 AM Feb 12, 2017 | Team Udayavani |

ನಾಳೆ ಒಂದು ಸರ್‌ಪ್ರೈಸ್‌ ಕೊಡ್ತೀನಿ. ಏನದು ಎಂದು ಊಹೆ ಮಾಡಿ ನೋಡೋಣ …’
ಹಾಗಂತ ಶುಕ್ರವಾರ ಒಂದು ಮೆಸೇಜ್‌ ಹಾಕಿಕೊಂಡಿದ್ದರು ನಿರ್ದೇಶಕ ಪ್ರಶಾಂತ್‌ ರಾಜ್‌. ಜೊತೆಗೊಂದು ಫೋಟೋ ಇತ್ತು. ಫೋಟೋ ನೋಡಿದರೆ, ಅವರು ಏರ್‌ಪೋರ್ಟ್‌ನಲ್ಲಿ ನಿಂತಿರುವುದು ಸ್ಪಷ್ಟವಾಗುತಿತ್ತು. ಆದರೆ, ಅವರು ಎಲ್ಲಿಗೆ ಹೊರಟಿದ್ದಾರೆ, ಯಾವ ಸರಪ್ರೈಸ್‌ ಕೊಡುತ್ತಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆ ಗುಟ್ಟು ಶನಿವಾರ ಬೆಳಿಗ್ಗೆ ಹೊರಬಿದ್ದಿದೆ.ಅದೇನೆಂದರೆ, ಪ್ರಶಾಂತ್‌ ರಾಜ್‌ ಸದ್ಯದಲ್ಲೇ ಗಣೇಶ್‌ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದ ಟೈಟಲ್‌ “ಆರೆಂಜ್‌’. ಹೌದು, “ಜೂಮ್‌’ಯಶಸ್ಸಿನ ನಂತರವೇ ಗಣೇಶ್‌ ಅಭಿನಯದಲ್ಲಿ ಇನ್ನೊಂದು ಚಿತ್ರವನ್ನು ನಿರ್ದೇಶಿಸುವುದಾಗಿ ಪ್ರಶಾಂತ್‌ ಹೇಳಿದ್ದರು. ಆದರೆ,ಗಣೇಶ್‌ ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಹಳೆಯ ಎಲ್ಲಾ ಕೆಲಸಗಳು ಮುಗಿದಿವೆ. “ಚಮಕ್‌’ ಮುಂದಿನ ತಿಂಗಳು ಶುರುವಾಗಲಿದೆ.

Advertisement

“ಚಮಕ್‌’ ನಂತರ ಪ್ರಶಾಂತ್‌ ರಾಜ್‌ಗೆ  ಡೇಟ್ಸ್‌ ಕೊಟ್ಟಿದ್ದಾರೆ ಗಣೇಶ್‌. ಚಿತ್ರ ಶುರುವಾಗುವುದೇನಿದ್ದರೂ ಅವರ ಹುಟ್ಟುಹಬ್ಬಕ್ಕೇ. ಆದರೆ, ಶನಿವಾರ ಚಿತ್ರದ ಟೈಟಲ್‌ ಲಾಂಚ್‌ ಆಗಿದೆ. ಇಷ್ಟು ಬೇಗ ಆಗುವುದಕ್ಕೂ ಒಂದು ಕಾರಣವೇನಿದೆ. ಅದೇನೆಂದರೆ, ಶನಿವಾರ ಗಣೇಶ್‌ ಮತ್ತು ಶಿಲ್ಪಾ ಗಣೇಶ್‌ ಅವರ ಮದುವೆ ವಾರ್ಷಿಕೋತ್ಸವ. ಈ ಸಂಭ್ರಮದಲ್ಲಿ ಚಿತ್ರದ ಹೆಸರನ್ನು ಬಿಡುಗಡೆ ಮಾಡಲಾಗಿದೆ.

“ಆರೆಂಜ್‌’ ಚಿತ್ರವೂ”ಜೂಮ್‌’ಗಿಂಥ ಕಲರ್‌ ಫ‌ುಲ್‌ ಆಗಿರುವುದಷ್ಟೇ ಅಲ್ಲ, ಮನರಂಜನೆಯೂ ಹೆಚ್ಚಿರುತ್ತದಂತೆ. “ತೆಲುಗಿನಲ್ಲೂ ಇಂಥದ್ದೇ ಒಂದು ಹೆಸರಿನ ಚಿತ್ರ ಬಂದಿದೆ. ಆದರೆ, ರಾಮ್‌ ಚರಣ್‌ ತೇಜ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಅಪ್ಪಟ ಕನ್ನಡ ಚಿತ್ರ. ಸಖತ್‌ ಟ್ರೆಂಡಿಯಾಗಿರುತ್ತದೆ. ಶ್ರೀಮಂತ್ರ ಆಸೆಗಳು ಏನೇನಿರುತ್ತದೆ ಎಂದು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇನೆ. ಚಿತ್ರದಲ್ಲಿ ಬಹುತೇಕ “ಜೂಮ್‌’ ತಂಡವೇ ಇರುತ್ತದೆ. ನಾಯಕಿಯ ಹುಡುಕಾಟ ಸದ್ಯಕ್ಕೆ ನಡೆಯುತ್ತಿದೆ’ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ ಪ್ರಶಾಂತ್‌ ರಾಜ್‌.

ಅಂದಹಾಗೆ, ಚಿತ್ರದ ಟೈಟಲ್‌ ಬಿಡುಗಡೆಯಾಗಿದ್ದು ಶಿರಡಿಯ ಸಾಯಿಬಾಬ ದೇವಸ್ಥಾನದಲ್ಲಿ. ಇಲ್ಲಿ ಇದುವರೆಗೂ ಯಾವುದೇ ಕನ್ನಡದ ಚಿತ್ರದ ಟೈಟಲ್‌ ಬಿಡುಗಡೆಯಾಗಿರಲಿಲ್ಲವಂತೆ. ಈ ಸಂದರ್ಭದಲ್ಲಿ ಗಣೇಶ್‌, ಶಿಲ್ಪ ಗಣೇಶ್‌,ಪ್ರಶಾಂತ್‌ ರಾಜ್‌, ನಿರ್ಮಾಪಕ ನವೀನ್‌ ಜೊತೆಗೆ “ಮುಗುಳು ನಗೆ’ ನಿರ್ಮಾಪಕ ಸಯ್ಯದ್‌ ಸಲಾಂ ಸೇರಿದಂತೆ ಹಲವರು ಜೊತೆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next