Advertisement

ಗಣೇಶ ಚತುರ್ಥಿ ಹಿನ್ನೆಲೆ: ಸಂಚಾರ ದಟ್ಟಣೆ

12:57 AM Aug 31, 2019 | Team Udayavani |

ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸರಣಿ ರಜೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಮೆಜೆಸ್ಟಿಕ್‌ ಸುತ್ತಾ-ಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಗೌರಿ-ಗಣೇಶ್‌ ಹಬ್ಬ ಹಿನ್ನೆಲೆಯಲ್ಲಿ ಸೋಮವಾರ ರಜೆ ಇದ್ದು, ವಾರಾಂತ್ಯ ಪ್ರಯುಕ್ತ ಸಾರ್ವಜನಿಕರು ಶುಕ್ರವಾರ ರಾತ್ರಿಯೇ ತಮ್ಮ-ತಮ್ಮ ಊರುಗಳಿಗೆ ತೆರಳಲು ಮೆಜೆಸ್ಟಿಕ್‌ಗೆ ಆಗಮಿಸಿದ್ದರು.

Advertisement

ಹೀಗಾಗಿ ಮೆಜೆಸ್ಟಿಕ್‌, ಓಕಳೀಪುರ, ಆನಂದರಾವ್‌ ವೃತ್ತ, ರೈಲ್ವೆ ನಿಲ್ದಾಣ ಸಮೀಪ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಮತ್ತೂಂದೆಡೆ ಖಾಸಗಿ ಬಸ್‌ಗಳ ಹಾವಳಿ ಸಹ ಅಧಿಕವಾಗಿದ್ದು, ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಅಲ್ಲದೆ, ಸಾಮಾನ್ಯ ದಿನಗಳಿಗಿಂತ ಹೆಚ್ಚು ಪ್ರಯಾಣ ದರ ನಿಗದಿ ಪಡಿಸಿದ್ದರು. ಸಂಚಾರ ದಟ್ಣಣೆ ನಿಯಂತ್ರಿಸಲು ಸಂಚಾರ ಪೊಲೀಸರು ಹೈರಾಣಾದರು.

Advertisement

Udayavani is now on Telegram. Click here to join our channel and stay updated with the latest news.

Next