Advertisement
ದಾಖಲಾತಿ ತೋರಿಸಿದರೂ ಪೊಲೀಸರು ಹಣಕ್ಕೆ ಒತ್ತಾಯಿಸಿದರು ಎಂಬುದು ದಂಪತಿ ಆರೋಪ. ಆದರೆ, ದಾಖಲಾತಿಗಳು ಸಮರ್ಪಕವಾಗಿರಲಿಲ್ಲ. ಇದಕ್ಕಾಗಿ ನೋಟಿಸ್ ನೀಡಿದ್ದಕ್ಕೆ ದಂಪತಿ ರಾದ್ಧಾಂತ ಸೃಷ್ಟಿಸಿದ್ದಾರೆ ಎಂಬುದು ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರ ವಿವರಣೆ. ಘಟನೆ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಮಹಾನಗರ ಸಂಚಾರಿ ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
Related Articles
Advertisement
ನಂತರ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರೇ ರಸ್ತೆಯಲ್ಲಿಟ್ಟಿದ್ದ ಲಗೇಜ್ಗಳನ್ನೆಲ್ಲ ಕಾರಿಗೆ ಹಾಕಿದ್ದಾರೆ. ಇದರಿಂದ ಹೆದ್ದಾರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡು, ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ದೃಶ್ಯಾವಳಿಗಳನ್ನು ಕೆಲ ವಾಹನಗಳ ಸವಾರರು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರು ಹೇಳೋದೇನು?: ಕಾರಿನಲ್ಲಿ ಹೊರಟಿದ್ದ ದಂಪತಿಯ ದಾಖಲಾತಿ ಸಮರ್ಪಕವಾಗಿರಲಿಲ್ಲ. ಹೀಗಾಗಿ ಸಿಬ್ಬಂದಿ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಇದರಿಂದ ಕೆರಳಿದ ಅವರು ವಾಗ್ವಾದಕ್ಕೆ ಇಳಿದಿದ್ದಾರೆ. ಅಲ್ಲದೆ ಕಾರನ್ನು ಹೆದ್ದಾರಿಯಲ್ಲಿ ಅಡ್ಡಲಾಗಿ ನಿಲ್ಲಿಸಿ ಮಹಿಳೆ, ಮಗುವಿನೊಂದಿಗೆ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದಾರೆ. ನಾವು ಸಂಚಾರಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ನೀವು ದಂಡ ಕಟ್ಟುವುದು ಬೇಡ ಹೋಗಿ ಎಂದರೂ ಕೇಳದೆ ರಾದ್ಧಾಂತ ಮಾಡಿದ್ದಾರೆ. ಹಣ ಕೇಳುತ್ತಿದ್ದಾರೆಂದು ಸಿಬ್ಬಂದಿ ಮೇಲೆಯೇ ಆರೋಪ ಹೊರಿಸಿದ್ದಾರೆ ಎಂಬುದು ಪೊಲೀಸರ ಆರೋಪ.
ಈ ಕುರಿತು ವರದಿ ನೀಡುವಂತೆ ಸಂಚಾರ ಎಸಿಪಿ ಅವರಿಗೆ ಸೂಚಿಸಲಾಗಿದೆ. ಘಟನೆ ಕುರಿತು ದಂಪತಿ ದೂರು ಕೊಟ್ಟಿಲ್ಲ. ಅವರು ದೂರು ಸಲ್ಲಿಸಿದರೆ ಸ್ವತಂತ್ರ ತನಿಖೆ ನಡೆಸಲು ಸಿದ್ಧ. ಆಗ ತಪ್ಪಿತಸ್ಥರೆಂದು ಕಂಡು ಬಂದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.-ಡಾ| ಶಿವಕುಮಾರ ಗುಣಾರೆ, ಡಿಸಿಪಿ, ಸಂಚಾರ ಮತ್ತು ಅಪರಾಧ ವಿಭಾಗ.