Advertisement

ಜೀವ ಚೈತನ್ಯಕ್ಕೆ ಗಣಪತಿಯೇ ಆಧಾರ

10:06 PM Aug 21, 2020 | mahesh |

ಒಮ್ಮೆ ಚತುರ್ಮುಖ ಬ್ರಹ್ಮದೇವರ ಸನ್ನಿಧಿಯಲ್ಲಿ ಯಾರಿಗೆ ಅಗ್ರ ಪೂಜೆ ಸಲ್ಲಬೇಕು ಎಂಬ ಚರ್ಚೆ ಆಯಿತು. ಆಗ ಬ್ರಹ್ಮದೇವರು ಯಾರು ಪ್ರಪಂಚ ಪ್ರದಕ್ಷಿಣೆಯನ್ನು ಮೊದಲು ಪೂರ್ಣಗೊಳಿಸುವರೋ ಅವರಿಗೆ ಅಗ್ರ ಪೂಜೆ ಎಂದರು. ಎಲ್ಲ ದೇವತೆ ಗಳು ತಮ್ಮ ತಮ್ಮ ವಾಹನ ವನ್ನೇರಿ ಪ್ರಯಾಣ ಬೆಳೆಸಿದರು. ಆದರೆ ದೊಡ್ಡ ಹೊಟ್ಟೆಯ

Advertisement

ಗಣಪತಿಯು ಮಾತಾಪಿತೃಗಳಾದ ಉಮಾ- ಮಹೇ ಶ್ವರರಿಗೇ ಪ್ರದಕ್ಷಿಣೆ ಹಾಕಿ ಕುಳಿ ತನು. ಆಶ್ಚರ್ಯಗೊಂಡ ದೇವತೆಗಳು ವಿಚಾರಿಸಿದಾಗ ಚತುರ್ಮುಖ ಬ್ರಹ್ಮದೇವರು, ತಂದೆ ತಾಯಿಗೆ ನಮಿಸಿದವರಿಗೆ ಸಮಸ್ತ ಭೂ ಪ್ರದಕ್ಷಿಣೆಯ ಪುಣ್ಯ ಫಲವಿದೆ. ಆದ್ದರಿಂದ ಗಣಪತಿಗೆ ಅಗ್ರ ಪೂಜೆ ಸಲ್ಲಬೇಕು ಎಂದರು.

ಜೀವನದಲ್ಲಿ ಪೂರ್ಣಪ್ರಯತ್ನ ಮತ್ತು ಬುದ್ಧಿಕೌಶಲದಿಂದ ಸಕಲ ಕ್ರಿಯೆ- ಕಾರ್ಯಗಳಲ್ಲಿ ಅಗ್ರಸ್ಥಾನ ಪಡೆಯುವ ಪ್ರಯತ್ನ ಹಾಗೂ ಹಿರಿಯರ ಆದರ ಮತ್ತು ಸೇವೆ ಈ ಕಥೆಯ ಮೂಲ ಸಂದೇಶ.

ಮಹಾ ಕಾಯವುಳ್ಳ ಗಜ ಮುಖ ಸಣ್ಣ ಇಲಿಯ ಮೇಲೆ ಕುಳಿತಿರುವುದು ಬಹಳ ಆಶ್ಚರ್ಯಕರ. ಆಧ್ಯಾತ್ಮಿಕ ವಾಗಿ ಇಲಿ ನಮ್ಮ ಇಂದ್ರಿಯ ಗಳ ಪ್ರತೀಕ. ಇಲಿಗಳು ಹೇಗೆ ಚಂಚಲವೋ ಹಾಗೆಯೇ ನಮ್ಮ ಇಂದ್ರಿಯಗಳು. ನಾವು ಗಣಪತಿಯ ಹಾಗೆ ನಮ್ಮ ಇಂದ್ರಿಯಗಳ ಮೇಲೆ ಸವಾರಿ ಮಾಡ ಬೇಕೇ ವಿನಾ ಅವು ನಮ್ಮ ಮೇಲಲ್ಲ ಎಂಬುದಿದರ ಸಂದೇಶ. ಗಣಪತಿಯ ಕೈಯಲ್ಲಿರುವ ಅಂಕುಶವು ನಮ್ಮನ್ನು ನಾವೇ ತಿದ್ದಿ ಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ.

ಗಣಪತಿಯು ವಿಘ್ನ ನಿವಾರಕನೂ ಹೌದು, ವಿಘ್ನ ಕಾರಕನೂ ಹೌದು. ಶ್ರೀ ವಾದಿರಾಜ ತೀರ್ಥರೂ ತಮ್ಮ ತೀರ್ಥ ಪ್ರಬಂಧದಲ್ಲಿ, ದುಷ್ಟಾನಾಂ ವಿಘನಕರ್ತಾ ಸುಚರಿತ ಸುಜನ ಸ್ತೋಮ ವಿಘ್ನಾಪಹರ್ತಾ ಎನ್ನುತ್ತಾರೆ. ಅಂದರೆ ದುರ್ಜನರಿಗೆ ಆತ ವಿಘ್ನ ಕರ್ತಾ, ಸಜ್ಜನರಿಗೆ ವಿಘ್ನ ನಿವಾರಕ.

Advertisement

ಗಣಪತಿ ಚೈತನ್ಯಮೂರ್ತಿ, ಜ್ಞಾನರೂಪಿ, ಆಕಾಶಾಭಿಮಾನಿ, ಶಬ್ದಕ್ಕೆ ಒಡೆಯ. ಆದ್ದರಿಂದ ಮಹಾಭಾರತವು ನಿರಂತರ ಪ್ರಸಾರವಾಗ ಲೆಂಬ ಇಚ್ಛೆಯಿಂದ ವ್ಯಾಸರು ಗಣಪತಿಯನ್ನು ಆಶ್ರಯಿಸಿದರು. ಅವನ ತಾಯಿ ಪಾರ್ವತಿಯು ಪರ್ವತ ರಾಜನ ಮಗಳು. ಆಕೆ ತನ್ನ ದೇಹದ ಅಂಗರಾಗದಿಂದ ಬಾಲಕನನ್ನು ತಯಾರಿಸಿ ಜೀವ ಕಳೆಯನ್ನು ನೀಡಿದಳು. ಮುಂದೆ ಶಿವನಿಂದ ಸಂಹರಿಸಲ್ಪಟ್ಟು ಆನೆಯ ಮುಖವನ್ನಿಟ್ಟು ಪ್ರಾಣಪ್ರತಿಷ್ಠೆಯಾಗಿ “ಗಜಾನನ’ ಆದನು. ಪೃಥ್ವಿಯು ಜೀವ ಕಳೆಯ ಸೆಲೆ. ಒಂದು ಮುಷ್ಟಿ ಮಣ್ಣು, ನೀರು -ಗಾಳಿಯ ಸಂಯೋಗದಿಂದ ಬೀಜವನ್ನು ಮೊಳಕೆ ಬರಿಸಿ ಗಿಡವಾಗಿಸುವ ಸಾಮರ್ಥ್ಯ ಪಡೆದಿದೆ. ಆದ್ದರಿಂದ ಮಹಾಗಣಪತಿ ಜೀವ ಚೈತನ್ಯಕ್ಕೆ ಆಧಾರ. ಮಣ್ಣಿನಲ್ಲಿ ವಿಗ್ರಹ ಮಾಡ ಬೇಕಾದರೆ ಮಣ್ಣನ್ನು ಮೆತ್ತಿ ಮೆತ್ತಿ ಆಕಾರ ತರಬೇಕು. ಗಣಪತಿಯು ದುರ್ಗುಣಗಳನ್ನು ಕೆತ್ತಿ ತೆಗೆದು ಸದ್ಗುಣಗಳನ್ನು ಮೆತ್ತಿ ನಮ್ಮ ಜೀವನ ಪಾವನವಾಗಿಸುತ್ತಾನೆ. ಮಳೆಯಿಂದ ಭೂಮಿ ತೋಯ್ದು ಸಸ್ಯ ಶ್ಯಾಮಲೆಯಾದ ಸಮಯದಲ್ಲಿ ಗಣಪತಿಯ ಆರಾಧನೆಯಿಂದ ದವಸ ಧಾನ್ಯಗಳು ಯಥೇಷ್ಟವಾಗುತ್ತವೆ.

 ಶ್ರೀ ಶರವು ರಾಘವೇಂದ್ರ ಶಾಸ್ತ್ರೀ
ಶಿಲೆ ಶಿಲೆ ಆಡಳಿತ ಮೊಕ್ತೇಸರರು ಮತ್ತು ಪ್ರಧಾನ ಅರ್ಚಕರು

Advertisement

Udayavani is now on Telegram. Click here to join our channel and stay updated with the latest news.

Next