Advertisement

ಇಂದು ಮಧ್ಯಾಹ್ನ ಗಲ್ಲು ನಿರ್ಧಾರ

10:03 AM Feb 03, 2020 | mahesh |

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳ ಗಲ್ಲುಶಿಕ್ಷೆಗೆ ತಡೆ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೇಂದ್ರ ಸರಕಾರ ಶನಿವಾರ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿ ಸ್ವೀಕರಿಸಿರುವ ದಿಲ್ಲಿ ಹೈಕೋರ್ಟ್‌ ರವಿವಾರ ಅಪರಾಹ್ನ 3 ಗಂಟೆಗೆ ಈ ನಾಲ್ವರೂ ಅಪರಾಧಿಗಳ ಗಲ್ಲು ಶಿಕ್ಷೆ ಸಮಯವನ್ನು ನಿರ್ಧಾರ ಮಾಡಲಿದೆ.

Advertisement

ಶಿಕ್ಷೆ ವಿಳಂಬವಾಗುತ್ತಿರುವುದು ಸರಿಯಲ್ಲ ಎಂದು ಸರಕಾರ ಕೋರ್ಟ್‌ಗೆ ತಿಳಿಸಿದೆ. ಈ ಹಿಂದೆ ದಿಲ್ಲಿ ಕೋರ್ಟ್‌ ಹೊರಡಿಸಿದ್ದ ಡೆತ್‌ ವಾರಂಟ್‌ ಪ್ರಕಾರ ಶನಿವಾರ(ಫೆ.1)ವೇ ನಾಲ್ವರು ಅತ್ಯಾಚಾರಿಗಳನ್ನು ನೇಣು ಗಂಬಕ್ಕೇರಿಸಬೇಕಿತ್ತು. ಆದರೆ ಅಪರಾಧಿ ಗಳ ಕಾನೂನಾತ್ಮಕ ಅವಕಾಶಗಳು ಬಾಕಿ ಉಳಿದಿರುವ ಕಾರಣ ಶುಕ್ರವಾರ ಕೊನೆಯ ಕ್ಷಣದಲ್ಲಿ ಗಲ್ಲುಶಿಕ್ಷೆ ಜಾರಿಗೆ ಕೋರ್ಟ್‌ ತಡೆ ನೀಡಿತ್ತು.

ಮತ್ತೂಬ್ಬನಿಂದ ಅರ್ಜಿ
ಈ ನಡುವೆ, ಅಪರಾಧಿ ವಿನಯ್‌ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಕೋವಿಂದ್‌ ಅವರು ಶನಿವಾರ ತಿರಸ್ಕರಿಸಿದ್ದು, ಅದರ ಬೆನ್ನಲ್ಲೇ, ಮತ್ತೂಬ್ಬ ದೋಷಿ ಅಕ್ಷಯ್‌ ಠಾಕೂರ್‌ ಸಹ ಕ್ಷಮಾದಾನ ಕೋರಿ ಅರ್ಜಿ ಸಲ್ಲಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next