Advertisement

ಕೋವಿಡ್ ಲಾಕ್ ಡೌನ್ ಪರಿಣಾಮ: ಮಾನವ ರಹಿತ ಗಗನಯಾನ ಮುಂದಕ್ಕೆ

12:06 PM Aug 17, 2020 | keerthan |

ಹೊಸದಿಲ್ಲಿ: ಇದೇ ಡಿಸೆಂಬರ್‌ನಲ್ಲಿ ಅನುಷ್ಠಾನಗೊಳ್ಳಬೇಕಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಮಾನವರಹಿತ ಗಗನಯಾನ ಯೋಜನೆ, ಮುಂದಕ್ಕೆ ಹೋಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆ ಯೋಜನೆಯ ತಯಾರಿಗೆ ಹಿನ್ನಡೆ ಆಗಿದ್ದರಿಂದ ಯೋಜನೆ ಅನುಷ್ಠಾನವೂ ಮುಂದೂಡಲ್ಪಡಲಿದೆ.

ಎರಡು ವರ್ಷಗಳ ಹಿಂದೆ, ಕೆಂಪುಕೋಟೆಯಲ್ಲಿ ನಡೆದಿದ್ದ ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, “”2022ರಲ್ಲಿ ಭಾರತ, ತನ್ನ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದ್ದು, ಅದರ ಸವಿನೆನಪಿಗಾಗಿ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ” ಎಂದು ತಿಳಿಸಿದ್ದರು.

ಅದಕ್ಕೆ ಪೂರ್ವಭಾವಿಯಾಗಿ, ಎರಡು ಮಾನವರಹಿತ ಗಗನಯಾತ್ರೆಗಳನ್ನು ಕೈಗೊಳ್ಳಲು ಇಸ್ರೋ ನಿರ್ಧರಿಸಿತ್ತು. 2020ರ ಡಿಸೆಂಬರ್‌ನಲ್ಲಿ ಹಾಗೂ 2021ರ ಜೂನ್‌ ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಲು ನಿರ್ಧರಿಸಲಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next