Advertisement

ಪ್ರತ್ಯೇಕ ವಿದರ್ಭ: ಪ್ರತಿಭಟನಕಾರರಿಗೆ ಬೆದರಿಕೆ ಹಾಕಿದ ಸಚಿವ ಗಡ್ಕರಿ

09:53 AM Mar 07, 2019 | Team Udayavani |

ನಾಗ್ಪುರ : ”ಜಾಸ್ತಿ ಗಲಾಟೆ ಮಾಡಿದರೆ ನಿಮ್ಮನ್ನು ಹೊಡೆದು ಹೊರ ಹಾಕುತ್ತೇನೆ” ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ನಿತಿನ್‌ ಗಡ್ಕರಿ ಅವರು ಪ್ರತ್ಯೇಕ ವಿದರ್ಭ ರಾಜ್ಯ ಪ್ರತಿಭಟನಕಾರರ ಮೇಲೆ ಕೋಪೋದ್ರಿಕ್ತರಾಗಿ ಗುಡುಗಿದ ಘಟನೆ ಇಲ್ಲಿನ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ನಡೆಯಿತು. 

Advertisement

ಸಚಿವ ಗಡ್ಕರಿ ಅವರ ಭಾಷಣ ಮಾಡುತ್ತಿದ್ದಂತೆಯೇ ಜನರ ಗುಂಪೊಂದು ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ಘೋಷಣೆ ಕೂಗಿ ಗಲಾಟೆ ಮಾಡುತ್ತಿತ್ತು. ಇವರನ್ನು ಶಾಂತಗೊಳಿಸಲು ಗಡ್ಕರಿ ಯತ್ನಿಸಿದರು. ಆದರೆ ನಯ-ವಿನಯದಿಂದ ಅದು ಅಸಾಧ್ಯವಾದಾಗ, ಸಿಟ್ಟಿಗೆದ್ದ ಗಡ್ಕರಿ, ಸುಮ್ಮನಾಗುತ್ತೀರಾ, ಇಲ್ಲ ನಿಮ್ಮನ್ನು ಹೊಡೆದು ಹೊರಹಾಕಬೇಕಾ ಎಂದು ಗುಡುಗಿದರು. 

ಗಡ್ಕರಿ ಅವರ ಈ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮತ್ತಿತರ ಗಣ್ಯರು ಭಾಗವಹಿಸಿದ್ದರು. 

ಗಡ್ಕರಿ ಅವರು ಭಾಷಣ ಮಾಡುತ್ತಿದ್ದಾಗ ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ಘೋಷಣೆ ಕೂಗಿದ ಒಂದು ಸಮೂಹ ಮಾಧ್ಯಮದವರು ಕುಳಿತೆಡೆಗೆ ಕರಪತ್ರಗಳನ್ನು ಎಸೆದರು ಗಲಾಟೆ ಮಾಡತೊಡಗಿತು. 

Advertisement

Udayavani is now on Telegram. Click here to join our channel and stay updated with the latest news.

Next