Advertisement

ಗದಗ: ಬಸ್ ಹರಿದು 31 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಗಜೇಂದ್ರಗಡ ಸಮೀಪದ ರಾಜೂರ ಗ್ರಾಮ‌ ಬಳಿಯ ದಿಂಡೂರ ಕ್ರಾಸ್ ನಲ್ಲಿ ಗುರುವಾರ ಸಂಜೆ(ಆ 22) ನಡೆದಿದೆ.

Advertisement

ಗಜೇಂದ್ರಗಡದಿಂದ ಬದಾಮಿ ಕಡೆಗೆ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ ಮಾರ್ಗ ಮಧ್ಯದ ದಿಂಡುರ ಕ್ರಾಸ್ ಬಳಿ ರಸ್ತೆ ಮೇಲೆ ಸಂಚಾರಿಸುತ್ತಿದ್ದ ಕುರಿಗಳ ಗುಂಪಿನ ಮೇಲೆ ಹಾಯ್ದ ಪರಿಣಾಮ 31 ಕುರಿಗಳು ಸಾವನ್ನಪ್ಪಿವೆ.

ರೋಣ ತಾಲೂಕಿನ ಹಿರೇಹಾಳ ಗ್ರಾಮದ ಅಪ್ಪಣ್ಣ ಎಂಬುವವರಿಗೆ ಸೇರಿದ್ದ ಕುರಿಗಳು ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next