Advertisement

ಭವಿಷ್ಯದ ಕನಸು ಸಂಸ್ಥೆ ಬೆಳವಣಿಗೆಗೆ ಕಾರಣ: ಪದ್ಮನಾಭ ಕೊಂಕೋಡಿ

07:58 PM Jun 03, 2019 | Sriram |

ವಿದ್ಯಾನಗರ: ಶತಮಾನವನ್ನು ಕಂಡ ಈ ಸಂಸ್ಥೆಯನ್ನು ಸಮಾಜಕ್ಕೆ ಅರ್ಪಿಸಿದ ಕೀರ್ತಿಯಲ್ಲಿ ಖಂಡಿಗೆ ಮನೆತನದವರ ಪಾಲು ಮಹತ್ತರವಾಗಿದ್ದು, ಪರಸ್ಪರ ಸಹಕಾರದಿಂದ ಅದೆಷ್ಟೋ ಕೆಲಸಗಳನ್ನು ಸಮಾಜಮುಖೀಯಾಗಿ ಮಾಡಬಹುದಾಗಿದೆ ಎಂಬುದಕ್ಕೆ ನೀರ್ಚಾಲು ಪರಿಸರವು ಸಾಕ್ಷಿಯಾಗಿದೆ. ಕನಸಿದ್ದವರು ಸಹಕಾರಿ ಕ್ಷೇತ್ರದ ನೇತೃತ್ವವನ್ನು ವಹಿಸಿಕೊಂಡಾಗ ಆ ಸಂಸ್ಥೆ ಬೆಳಗುತ್ತದೆ. ಈ ನಿಟ್ಟಿನಲ್ಲಿ ಹಿರಿಯರ ಶ್ರಮದಿಂದ ಬ್ಯಾಂಕ್‌ನ ಸಾಧನೆ ಅಪಾರ ಎಂದು ಸಹಕಾರ ಭಾರತಿಯ ಅಖೀಲ ಭಾರತ ಸಹ ಸಂಘಟನಾ ಕಾರ್ಯದರ್ಶಿ ಕೊಂಕೋಡಿ ಪದ್ಮನಾಭ ತಿಳಿಸಿದರು.

Advertisement

ಶನಿವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದ ಸಮಾರೋಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರಕ್ಕೆ ಯಾವುದೇ ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಬೆಂಬಲವನ್ನು ನೀಡುತ್ತಿಲ್ಲ. ಆದುದರಿಂದ ಸಹಕಾರಿ ಕ್ಷೇತ್ರವು ಸಂಕಷ್ಟದ ಮಧ್ಯೆ ಬೆಳೆಯಬೇಕಾಗಿದೆ. ಸಹಕಾರ ಭಾರತಿಯ ಸದಸ್ಯರ ನೇತƒತ್ವದಲ್ಲಿ ಈ ಎಲ್ಲ ಅಡೆತಡೆಗಳನ್ನು ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ ಮೀರಿ ನಿಂತಿದೆ ಎಂದು ಅಭಿಮಾನದಿಂದ ಹೇಳಬಹುದಾಗಿದೆ. ದೇಶದಲ್ಲಿರುವ ಒಂದೇ ಒಂದು ಸ್ವಯಂಸೇವಾ ಸಂಘಟನೆ ಸಹಕಾರ ಭಾರತಿಯಾಗಿದೆ ಎಂದರು.

ಸಹಕಾರ ಭಾರತಿಯ ಅಖೀಲ ಭಾರತ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್‌ ನಂಬ್ಯಾರ್‌ ಮಾತನಾಡಿದರು.ಬ್ಯಾಂಕ್‌ನ ಸದಸ್ಯರಿಗಿರುವ ಗ್ರೂಪ್‌ ಇನ್ಶೂರೆನ್ಸ್‌ ಯೋಜನೆಯನ್ನು ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ನ ವಿಭಾಗ ಪ್ರಬಂಧಕ ಹರೀಶ್‌ ಕುಮಾರ್‌ ಅವರು ಪೆರುಮುಂಡ ಶಂಕರನಾರಾಯಣ ಭಟ್ಟರಿಗೆ ನೀಡಿ ಉದ್ಘಾಟಿಸಿ ದರು. ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣಪತಿ ಕೋಟೆಕಣಿ ಶುಭಾಶಂಸನೆಗೆ„ದು ಮಾತನಾಡಿದರು.

ಕುಂಬಾxಜೆ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ, ನೀರ್ಚಾಲು ಕೆ.ಎ.ಸಿ.ಯಂ. ಸೊಸೆ„ಟಿಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ನೀರ್ಚಾಲು ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಉದನೇಶ ವೀರ, ಕೆ.ವಿ.ವಿ.ಇ.ಎಸ್‌.ಬದಿಯಡ್ಕ ಘಟಕ ಅಧ್ಯಕ್ಷ ಮುಹಮ್ಮದ್‌ ಹಾಜಿ ಕುಂಜಾರು, ಕೆ.ವಿ.ವಿ.ಇ.ಎಸ್‌. ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್‌ ಎಂ., ಬ್ಯಾಂಕ್‌ನ ಕಾರ್ಯದರ್ಶಿ ಅಜಿತ ಕುಮಾರಿ ಶುಭಕೋರಿದರು.

Advertisement

ನೂತನ ಕಟ್ಟಡ ವಾಸ್ತುಶಿಲ್ಪಿ, ಸಿವಿಲ್‌ ಇಂಜಿನಿಯರ್‌ ಕೆ.ಎನ್‌.ಭಟ್‌ ಬದಿಯಡ್ಕ, ಕಟ್ಟಡದ ಗುತ್ತಿಗೆದಾರ ರಾಜು ಸ್ಟೀಫನ್‌ ಕ್ರಾಸ್ತ ಬೇಳ ಅವರಿಗೆ ಗೌರವಾರ್ಪಣೆ ನೀಡಲಾಯಿತು.

ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿ ದುಡಿದ ಜಯರಾಮ ಶಾನುಭೋಗ್‌, ಮಾಜಿ ಅಧ್ಯಕ್ಷರಾದ ವಾಶೆ ಶ್ರೀಕೃಷ್ಣ ಭಟ್‌ ಹಾಗೂ ಕೋರಿಕ್ಕಾರು ವಿಷ್ಣು ಭಟ್‌, ಸಿಬ್ಬಂದಿ ವರ್ಗದವರಾದ ಸುಬ್ರಹ್ಮಣ್ಯ ಭಟ್‌ ಪುದುಕೋಳಿ, ವಿಶ್ವನಾಥ ಭಟ್‌ ಕೆ., ಶ್ರೀಕೃಷ್ಣ ಭಟ್‌ ವಳಕ್ಕುಂಜ, ವೆಂಕಟ್ರಮಣ ಭಟ್‌ ಬರ್ಲ, ಶಂಕರ ಭಟ್‌ ಬೊಳುಂಬು, ರಾಮನಾಯ್ಕ ಸರಳಿ ಕುಂಟಿಕಾನ ಹಾಗೂ ಕರ್ನಾಟಕ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ವಿಜೇತ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ ಕಡಪ್ಪು ಅವರನ್ನು ಸಮ್ಮಾನಿಸಲಾಯಿತು.

ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಶಂಕರನಾರಾಯಣ ಶರ್ಮ ನಿಡುಗಳ ವಂದಿಸಿದರು. ಪ್ರಾರಂಭದಲ್ಲಿ ಶ್ರೀಪತಿ ಪೆರ್ವ ಪ್ರಾರ್ಥಿಸಿದರು. ರವಿಕಾಂತ ಕೇಸರಿ ಕಡಾರು ನಿರೂಪಿಸಿದರು.

ಸಹಕಾರದಿಂದ ಹೆಮ್ಮೆ
ಸದಸ್ಯರು, ನೌಕರರು, ಗ್ರಾಹಕರು ಪರಸ್ಪರ ಸಹಕಾರ ಮನೋಭಾವದಿಂದ ಮುಂದುವರಿದರೆ ಸಹಕಾರಿ ಸಂಸ್ಥೆಗಳು ಪ್ರಗತಿಯನ್ನು ಕಾಣುತ್ತದೆ. ನೀರ್ಚಾಲು ಪರಿಸರದಲ್ಲಿ ಪರಸ್ಪರ ಸಹಕಾರೀ ಮನೋಭಾವದೊಂದಿಗೆ ಮುಂದುವರಿಯುವ ಉತ್ತಮ ಮನಸ್ಸುಗಳಿವೆ ಎಂಬುದು ನಮಗೆ ಹೆಮ್ಮೆಯಾಗಿದೆ.
-ಜಯದೇವ ಖಂಡಿಗೆ
ಅಧ್ಯಕ್ಷ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next