Advertisement

ರಾಮಮಂದಿರ ನಿಧಿ ಸಂಗ್ರಹ

01:17 PM Jan 15, 2021 | Team Udayavani |

ಲಕ್ಷ್ಮೀಶ್ವರ: ಪಟ್ಟಣದ ಗಣ್ಯ ವ್ಯಾಪಾರಸ್ಥ ವಿಜಯಣ್ಣ ಮಹಾಂತಶೆಟ್ಟರ ಅವರು 11,101 ರೂ. ನಿಧಿ ಸಮರ್ಪಿಸುವ ಮೂಲಕ ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಕನಸು ಸಾಕಾರಗೊಳ್ಳುವ ಎಲ್ಲ ಪೂರ್ವ ಸಿದ್ಧತೆ ನಡೆಯುತ್ತಿದೆ.  ಅದಕ್ಕಾಗಿ ಬೇಕಾದ ಆರ್ಥಿಕ ಸಹಾಯವನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಕೈಲಾದ ಮಟ್ಟಿನ ಅಳಿಲು ಸೇವೆ ಮಾಡಬೇಕು ಎಂದರು.

ಇದನ್ನೂ ಓದಿ:ಹೆಸರಿಲ್ಲದ ಪಾತ್ರ ಮತ್ತು ಹೆಸರು ಮಾಡುವ ‘ಹೀರೋ’: ಲಾಕ್‌ಡೌನ್‌ನಲ್ಲಿ ತಯಾರಾದ ರಿಷಭ್‌ ಚಿತ್ರ

ಧಾರವಾಡ ವಿಭಾಗ ಪ್ರಚಾರಕ ಶ್ರೀನಿವಾಸ ನಾಯಕ ಮಾತನಾಡಿದರು. ಪಟ್ಟಣದ ಬಸ್ತಿಬಣದಲ್ಲಿ ಕಾರ್ಯಾಲಯ ಪ್ರಾರಂಭಿಸಲಾಯಿತು. ಈ ವೇಳೆ ಮೌನೇಶ ಬಡಿಗೇರ, ಈರಣ್ಣ ಗಾಣಿಗೇರ, ಸುರೇಶ ಮೆಡ್ಲೆರಿ, ಗಜಾನನ ಹೆಗಡೆ, ರುದ್ರೇಶ ಅಳವಂಡಿ, ರಮೇಶ ಶೆಟ್ಟಿ, ಚಿಕ್ಕರಸ ಪೂಜಾರ, ಪ್ರದೀಪ ಮರಿಹೊಳಲಣ್ಣವರ, ಶಂಕರ ಬ್ಯಾಡಗಿ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ವಿಜಯ ಕುಂಬಾರ, ಸೋಮೇಶ ಉಪನಾಳ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next