Advertisement

“ರಾಜ್ಯದಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ’

07:55 AM May 05, 2018 | Team Udayavani |

ಕಾಪು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ರಾಜಕೀಯ ಚದುರಂಗದಾಟ ಕರ್ನಾಟಕದಲ್ಲಿ ನಡೆಯದು. ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ನೆಲಕ್ಕಚ್ಚಲಿದ್ದು, ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು 
ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜ ಹೇಳಿದರು. ಕಾಪು  ಪ್ರಸ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

Advertisement

ಕಾಂಗ್ರೆಸ್‌ನದ್ದು ಕಾಮ್‌ ಕೀ ಬಾತ್‌ ಸರಕಾರ ಮನ್‌ ಕೀ ಬಾತ್‌ ನಡೆಸುವ ಮೂಲಕ ಜನರನ್ನು ಓಲೈಕೆ ಮಾಡುವ ಯತ್ನ ನಡೆಸಿದೆ. ಆದರೆ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಮ್‌ ಕಿ ಬಾತ್‌ ಮಂತ್ರದೊಂದಿಗೆ ನಾವು ಕಾರ್ಯ ನಿರ್ವಹಿಸಿದ್ದೇವೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿಕೊಂಡಿದ್ದ ಬಿಜೆಪಿಗೆ ಈಗ ತಾವು ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಗೊತ್ತಾಗಿದೆ. ಆ ಕಾರಣಕ್ಕಾಗಿ ರೆಡ್ಡಿ ಬ್ರದರ್ ಬಳಸಲು,  ಜೆಡಿಎಸ್‌ನೊಂದಿಗೂ ಕೈ ಜೋಡಿಸುವ ಹಂತಕ್ಕೆ ತಲುಪಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್‌ ಶೆಟ್ಟಿ, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಅಬ್ದುಲ್‌ ಅಜೀಜ್‌ ಹೆಜಮಾಡಿ, ಶಿವಾಜಿ ಸುವರ್ಣ ಬೆಳ್ಳೆ, ಗುಲಾಂ ಅಹಮ್ಮದ್‌, ಪ್ರಶಾಂತ್‌ ಜತ್ತನ್‌, ಮೆಲ್ವಿನ್‌ ಡಿ’ಸೋಜಾ, ದಿನೇಶ್‌ ಕೋಟ್ಯಾನ್‌, ನವೀನ್‌ ಶೆಟ್ಟಿ, ಗುರುರಾಜ್‌ ಪೂಜಾರಿ, ಅಬ್ದುಲ್‌ ರಹಿಮಾನ್‌, ಎಚ್‌. ಉಸ್ಮಾನ್‌, ಮಹಮ್ಮದ್‌ ಫಾರೂಕ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next