Advertisement

ಭಾರತದಲ್ಲಿ ಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ!

12:05 AM May 08, 2023 | Team Udayavani |

ಲಂಡನ್‌: ಪ್ರಪಂಚದ ಯಾವುದೇ ದೇಶದಲ್ಲೂ ಭಾರತದಲ್ಲಿರುವಂತೆ ಮುಕ್ತ ಅಭಿವ್ಯಕ್ತಿ ಸ್ವಾತಂ ತ್ರ್ಯವಿಲ್ಲ. ಭಾರತದಲ್ಲಿನ ಪ್ರಜಾಸತ್ತೆಗೆ ಯಾವುದೇ ಕಡಿವಾಣವೂ ಇಲ್ಲ. ದೇಶದಲ್ಲಿನ ಪ್ರಜಾಸತ್ತಾತ್ಮಕ ಮೌಲ್ಯಗಳು ಹಿಂದೆಂದಿಗಿಂತಲೂ ಈಗ ಬಲಿಷ್ಠವಾಗಿವೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಲಂಡನ್‌ನಲ್ಲಿ ಹೇಳಿದ್ದಾರೆ.
ಬ್ರಿಟನ್‌ ದೊರೆಯಾಗಿ ಮೂರನೇ ಚಾರ್ಲ್ಸ್‌ ಪಟ್ಟಾಭಿಷಿಕ್ತರಾದ ಕಾರ್ಯಕ್ರಮದಲ್ಲಿ ಧನ್‌ಕರ್‌ ಪಾಲ್ಗೊಂಡಿದ್ದರು. ಈ ವೇಳೆ ಬ್ರಿಟನ್‌ನಿಂದ ವಾಪಸಾಗುವ ಮುನ್ನ ಭಾರತೀಯ ಹೈಕಮಿಷನ್‌ ವತಿಯಿಂದ ಆಯೋಜಿಸಲಾಗಿದ್ದ ಭಾರತೀಯ ಮೂಲದ ಬ್ರಿಟನ್ನಿಗರೊಂದಿಗಿನ ಸಂವಾದ ನಡೆಸಿದರು.

Advertisement

ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಪ್ರಜೆಗಳ ಮಹತ್ತರ ಪಾತ್ರವನ್ನುದ್ದೇಶಿಸಿ ಮಾತನಾಡಿದ ಅವರು ಬ್ರಿಟನ್‌ ವಿ.ವಿ.ಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಭಾರತೀಯ ವಿದ್ಯಾ ರ್ಥಿಗಳು ಮತ್ತು ಅವರ ಸಾಧನೆಗಳ ಬಗ್ಗೆ ದೇಶ ಹಮ್ಮೆಪಡು ತ್ತದೆ. ಭಾರತದ ಸದ್ಭಾವನ ರಾಯ ಭಾರಿಗಳಾಗಿ ನೀವೇ ಕಾರ್ಯನಿರ್ವಹಿಸಬೇಕಿದ್ದು, ಭಾರತದ ಬಗ್ಗೆಗಿನ ವದಂತಿಗಳಿಗೆ ಸ್ಪಷ್ಟವಾದ ಉತ್ತರ ನೀಡಿ ಎಂದು ಧನ್‌ಕರ್‌ ಕರೆ ನೀಡಿದ್ದಾರೆ.

ಜತೆಗೆ ಭಾರತ ಇಂದು ಜಾಗತಿಕ ಸಮಸ್ಯೆ ಗಳನ್ನು ತನ್ನದೇ ನಿಲುವಿನಲ್ಲಿ ಪರಿಹರಿಸುವಷ್ಟು ಸಮರ್ಥವಾಗಿದೆ. ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ರಾಷ್ಟ್ರವಾಗಿದೆ. ನಮ್ಮ ದೇಶದ ವಾಸ್ತವ ಸ್ಥಿತಿಯನ್ನು ತಿರುಚುವಂಥ ಹೇಳಿಕೆಗಳ ವಿರುದ್ಧ ಧ್ವನಿ ಎತ್ತರಿಸಿ, ಭಾರತದಲ್ಲಿನ ನಿಜವಾದ ಸ್ವಾತಂತ್ರ್ಯವನ್ನು, ಗೌರವನ್ನು ಎತ್ತಿ ಹಿಡಿಯುವ ಜವಾಬ್ದಾರಿ ವಿದ್ಯಾರ್ಥಿಗಳದ್ದು ಎಂದೂ ಮನವರಿಕೆ ಮಾಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next