Advertisement

ಒಟಿಪಿ ಸಂಖ್ಯೆ ಪಡೆದು 10 ಲಕ್ಷ ರೂಪಾಯಿ ಎಗರಿಸಿದ ವಂಚಕರು

02:28 PM Jun 13, 2021 | Team Udayavani |

ಬೆಳಗಾವಿ: ಬ್ಯಾಂಕ್‌ ಖಾತೆಯ ಕೆವೈಸಿ ಪರಿಷ್ಕೃತ ಗೊಳಿಸಲು ದಾಖಲೆ ನೀಡಿ, ಅನೇಕ ಬಾರಿ ಒಟಿಪಿ ಹಂಚಿಕೆ ಮಾಡಿದ್ದ ತಾಲೂಕಿನ ಕಂಗ್ರಾಳಿ ಕೆ.ಎಚ್‌. ಗ್ರಾಮದ ನಿವಾಸಿ ತಮ್ಮ ಖಾತೆಯಲ್ಲಿದ್ದ 10 ಲಕ್ಷ ರೂ.ಕಳೆದುಕೊಂಡಿದ್ದಾರೆ.

Advertisement

ಯಲ್ಲಪ್ಪ ನಾರಾಯಣ ಜಾಧವ ಎಂಬವರು 10 ಲಕ್ಷ ರೂ . ಕಳೆದುಕೊಂಡವರು. ಇತ್ತೀಚೆಗೆ 09339281627 ಸಂಖ್ಯೆಯಿಂದ ಕರೆ ಸ್ವೀಕರಿಸಿದ್ದ ಯಲ್ಲಪ್ಪ ಅವರಿಗೆ ಎಸ್‌ ಬಿಐ ಬ್ಯಾಂಕ್‌ ಖಾತೆಗೆ ಕೆವೈಸಿ ಅಪ್‌ ಡೇಟ್‌ ಮಾಡಬೇಕು . ಅದಕ್ಕಾಗಿ ಆಧಾರ್‌ ಕಾರ್ಡ್‌ , ಬ್ಯಾಂಕ್‌ ಪಾಸ್‌ಬುಕ್‌ ಝರಾಕ್ಸ್‌ ಪ್ರತಿ ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸುವಂತೆ ಹೇಳಿದ್ದಾರೆ.

ನಂತರ ಲಿಂಕ್‌ ಕಳುಹಿಸಿ, ಕ್ಲಿಕ್‌ ಮಾಡಿಸಿ, ಬಂದ ಒಟಿಪಿ ಸಂಖ್ಯೆ ಪಡೆದುಕೊಂಡಿದ್ದಾರೆ. ಹಂತಹಂತವಾಗಿ ಬ್ಯಾಂಕ್‌ ಖಾತೆಯಿಂದ 10 ಲಕ್ಷ ರೂ. ಎಗರಿಸಿದ್ದಾರೆ. ಈ ಕುರಿತು ಬೆಳಗಾವಿ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next