Advertisement

ಮಾಬುಕಳದಿಂದ ಕುಂದಾಪುರ ವರೆಗೆ ಬಿಜೆಪಿಯ ಕಾಲ್ನಡಿಗೆ ಜಾಥಾ

07:40 AM Aug 17, 2017 | Team Udayavani |

ಕೋಟೇಶ್ವರ: ಭಾರತೀಯ ಜನತಾ ಪಕ್ಷ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಮಾಬುಕಳದಿಂದ ಕುಂದಾಪುರ ತನಕ ನಡೆದ ಬೃಹತ್‌ ಕಾಲ್ನಡಿಗೆ ಜಾಥಾವು ಆ. 16 ರಂದು ಮಧ್ಯಾಹ್ನ 3 ಗಂಟೆಗೆ ಕೋಟೇಶ್ವರ ತಲುಪಿದ್ದು ಜಾಥಾದಲ್ಲಿ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ ಹೆಗ್ಡೆ ಪಾಲ್ಗೊಂಡಿದ್ದರು.

Advertisement

ಬಿಜೆಪಿಯ ವಿವಿಧ ಸಂಘಟನೆಗಳ ಪ್ರಮುಖರು ಜಿ.ಪಂ. ತಾ.ಪಂ. ಹಾಗೂ ಗ್ರಾ.ಪಂ. ಗಳ ಅಧ್ಯಕ್ಷರು ಉಪಾಧ್ಯಕರು ಸದಸ್ಯರು ಸಹಿತ ನಾನಾ ಭಾಗಗಳಿಂದ ಆಗಮಿಸಿ ಬಿಜೆಪಿ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಆಡಳಿತರೂಢ ಕಾಂಗ್ರೆಸ್‌ ಪಕ್ಷದ ಆಡಳಿತ ವಿಫಲತೆಯನ್ನು ವಿವರಿಸಿದರಲ್ಲದೇ ಬಡವರ ಹಕ್ಕುಪತ್ರ, ಮರಳುಗಾರಿಕೆ, ಪಡಿತರ ಚೀಟಿ ವಿತರಣೆ ಸಹಿತ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಲ್ಲಿ ವಿಫಲ ರಾಗಿರುವುದು ಜಿಲ್ಲೆಯ ಜನರಿಗೆ ಮೋಸ ಮಾಡಿದಂತಾಗಿದೆ. ಎಂದರು.

ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ ಜಿಲ್ಲೆಯ ಜನರಿಗೆ ಮೋಸ ಮಾಡಿರುವ ಕಾಂಗ್ರೆಸ್‌ ಸರಕಾರವು ಬಹು ಮುಖ್ಯವಾಗಿ ಮರಳುಗಾರಿಕೆ ಸಹಿತ ಇನ್ನಿತರ ಯೋಜನೆ ಒದಗಿಸುವುದರಲ್ಲಿ ಎಡವಿದ್ದು ಅನೇಕ ಕಾರ್ಮಿಕರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಈ ಒಂದು ವಿದ್ಯಮಾನದಿಂದ ಬೇಸತ್ತ ಈ ಭಾಗದ ಜನರು ಕಾಲ್ನಡಿಗೆಯ ಜಾಥಾ ಮೂಲಕ ಸರಕಾರದ ವೈಫಲ್ಯವನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಾಥಾದಲ್ಲಿ ಬಿಜೆಪಿಯ ಪ್ರಮುಖರಾದ ರಾಜೇಶ್‌ ಕಾವೇರಿ, ಬೆಳ್ವೆ ವಸಂತ ಕುಮಾರ್‌ ಶೆಟ್ಟಿ, ಕಿಶೋರ್‌ ಕುಮಾರ್‌, ಜಾನಕಿ ಬಿಲ್ಲವ, ರವೀಂದ್ರ ದೊಡ್ಮನೆ, ಉದಯ ನಾಯಕ್‌, ರಂಜಿತ್‌ ಕುಮಾರ್‌ ಶೆಟ್ಟಿ, ಗಿರೀಶ್‌ ಕುಂದಾಪುರ ಇನ್ನಿತರ ಅನೇಕ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next