Advertisement

ಜಡಿಮಳೆಯಿಂದ ಮತ್ತೆ ಭೂಕುಸಿತ: ಜಮ್ಮು ಶ್ರೀನಗರ ಹೆದ್ದಾರಿ ಬಂದ್‌

05:21 PM Jun 29, 2018 | udayavani editorial |

ಬನಿಹಾಲ್‌, ಜಮ್ಮು ಕಾಶ್ಮೀರ : ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನದ ಬಳಿಕ ಹೊಸದಾಗಿ ಮತ್ತೆ ಗುಡ್ಡ ಜರಿತ, ಭೂ ಕುಸಿತ ಉಂಟಾಗಿದೆ. ಪರಿಣಾಮವಾಗಿ ನೂರಾರು ವಾಹನಗಳು ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡಿವೆ.  ಇವುಗಳಲ್ಲಿ ಅಮರನಾಥ ಯಾತ್ರಿಕರ ವಾಹನಗಳು ಕೂಡ ನಿಂತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ 260 ಕಿ.ಮೀ. ಉದ್ದದ ಸರ್ವ ಋತು ಹೆದ್ದಾರಿಯಲ್ಲಿ ರಾಮ್‌ಸು ಎಂಬಲ್ಲಿಗೆ ಸಮೀಪ ಗಾಂಗ್ರೂ ಎಂಬಲ್ಲಿ ಜಡಿಮಳೆ ಉಂಟಾಗುತ್ತಿರುವ ಕಾರಣ ಹೊಸದಾಗಿ ಭೂಕುಸಿತಗಳು ಸಂಭವಿಸಿವೆ. ಹೆದ್ದಾರಿಯನ್ನು ತೆರವುಗೊಳಿಸುವ ಕೆಲಸ ಸಮರೋಪಾದಿಯಲ್ಲಿ ಸಾಗಿದೆ ಎಂದು ಡಿವೈಎಸ್‌ಪಿ ವಿಶಾಲ್‌ ಮನ್‌ಹಾಸ್‌ ತಿಳಿಸಿದ್ದಾರೆ. 

ಕಲ್ಲು ಬಂಡೆಗಳು ರಸ್ತೆಗೆ ಉರುಳಿ ಬೀಳುವ ಸ್ಥಳಗಳು ವಾಹನಗಳಿಗೆ ಹೆಚ್ಚು ಅಪಾಯಕಾರಿಯಾಗಿದ್ದು ಅವುಗಳನ್ನು ಗುರುತಿಸಿ ತೆರವು ಗೊಳಿಸುವ ಕಾರ್ಯ ನಡೆದಿದೆ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next