Advertisement

ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಉಚಿತ ವಾಹನ ಸೇವೆ

06:25 PM May 06, 2021 | Team Udayavani |

ಕೊಪ್ಪಳ: ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯು ಕೋವಿಡ್ ಸೋಂಕಿತರನ್ನ ಆಸ್ಪತ್ರೆಗೆ ಕರೆ ತರಲು ತಾಲೂಕಿಗೆ ಎರಡರಂತೆ ರಾಜ್ಯದಲ್ಲಿ 350 ಉಚಿತ ವಾಹನ ಸೇವೆ ಕಲ್ಪಿಸುವ ಮೂಲಕ ಸಮಾಜಿಕ ಕಳಕಳಿ ಮೆರೆದಿದೆ. ನಗರದ‌ ಕುಷ್ಟಗಿ ರಸ್ತೆಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಚೇರಿ ಆವರಣದಲ್ಲಿ ವಾಹನಗಳಿಗೆ ಚಾಲನೆ ನೀಡಲಾಯಿತು.

Advertisement

ರಾಜ್ಯದಲ್ಲಿ ಕೋವಿಡ್ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿವೆ. ಸರ್ಕಾರವು ಕರ್ಪ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸರಿಯಾದ ಸಾರಿಗೆ, ವಾಹನದ ವ್ಯವಸ್ಥೆ ಇಲ್ಲದಂತಾಗಿದೆ. ಕೋವಿಡ್ ಪರೀಕ್ಷೆ ಮಾಡಿಸಿ ಸೋಂಕು ದೃಢಪಟ್ಟ ವ್ಯಕ್ತಿಗಳನ್ನ ಹಾಗೂ ತೀರ್ವ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಆಸ್ಪತ್ರೆಗೆ ಕರೆ ತರಲು ಎರಡು ಉಚಿತ ವಾಹನಗಳ ವ್ಯವಸ್ಥೆ ಮಾಡಿದೆ. ಇದರ ಸೌಲಭ್ಯ ಪಡೆಯುವಂತೆ  ಕೊಪ್ಪಳ ಜಿಲ್ಲಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ದೇಶಕ ಸದಾನಂದ ಬಗೇರಾ ತಿಳಿಸಿದ್ದಾರೆ.

ಈ ವೇಳೆ  ಶ್ರೀಕ್ಷೇತ್ರ ಧರ್ಮಸ್ಥಳ ತಾಲೂಕು ಯೋಜನಾ ಅಧಿಕಾರಿ ಅಜೀತ ಹೆಗಡೆ, ಸಿಬ್ಬಂದಿಗಳಾದ ರಮೇಶ ಜಿ, ಮಹಾದೇವ, ಪ್ರಶಾಂತ, ಮಂಜುನಾಥ, ಹೇಮವತಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next