Advertisement

ಮುಂಬಯಿಯ ವಿವಿಧೆಡೆ ಉಚಿತ ಗ್ರಂಥಾಲಯ ಸ್ಥಾಪನೆ

03:46 PM Apr 15, 2022 | Team Udayavani |

ಮುಂಬಯಿ: ಜನರಲ್ಲಿ ಓದುವ ಹವ್ಯಾಸವನ್ನು ಜೀವಂತ ವಾಗಿರಿಸಲು ಹಲವಾರು ಸಂಸ್ಥೆಗಳು ನಗರಾದ್ಯಂತ ಗ್ರಂಥಾಲ ಯವನ್ನು ಸ್ಥಾಪಿಸುತ್ತಿವೆ. ಅದರಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ಅರವಿಂದ ಗಾವಡೆ ಹಾಗೂ ಪ್ರಧಾನ ಕಾರ್ಯದರ್ಶಿ ರೀಟಾ ಗುಪ್ತಾ ರಾಬಲೆಯ ಗೋತಿವಲಿ ಗ್ರಾಮದಲ್ಲಿ ಉಚಿತ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.

Advertisement

ಜತೆಗೆ ಉಚಿತವಾಗಿ ದಿನಪತ್ರಿಕೆಗಳನ್ನೂ ಇರಿಸಿದ್ದಾರೆ. ಈ ಪ್ರದೇಶದ ನಾಗರಿಕರು ಗ್ರಂಥಾಲಯದ ಸಂಪೂರ್ಣ ಪ್ರಯೋಜನವನ್ನು ಪಡೆಯಬಹು ದಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ರಿತಾ ಗುಪ್ತ ತಿಳಿಸಿದ್ದಾರೆ.

ನವಿಮುಂಬಯಿ ಮುನ್ಸಿಪಲ್‌ ಕಾರ್ಪೋರೇಶನ್‌ ಸಹ ಓದುವಿಕೆ ಯನ್ನು ಪ್ರೋತ್ಸಾಹಿಸುತ್ತಿದೆ. ಇದರ ಜತೆಗೆ ನಗರವನ್ನು ಸುಂದರವಾಗಿರಿಸುವ ಉದ್ದೇಶದಿಂದ ಪ್ರಸಿದ್ಧ ಕವಿಗಳ ಸಾಲನ್ನು ನಗರದಾದ್ಯಂತ ಚಿತ್ರಿಸಲಾಗಿದೆ. ಸಮಾಜದಲ್ಲಿ ಏನಾಗುತ್ತಿದೆ ಎಂಬುವುದನ್ನು ತಿಳಿಯಲು ಸದಾ ಓದುತ್ತಾ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next