Advertisement

ಉಚಿತ ಕೊಡುಗೆ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ

01:00 AM Aug 27, 2022 | Team Udayavani |

ಹೊಸದಿಲ್ಲಿ: ಚುನಾವಣೆಗಳು ಪ್ರಕಟವಾಗುವ ಮೊದಲೇ ಉಚಿತ ಕೊಡುಗೆಗಳನ್ನು ನೀಡುವುದು ಔಚಿತ್ಯಪೂರ್ಣವೇ ಎಂಬುದನ್ನು ಮೂವರು ಸದಸ್ಯರ ನ್ಯಾಯಪೀಠ ತೀರ್ಮಾನಿಸಲಿದೆ. ಈ ಬಗ್ಗೆ ಗುರುವಾರ ಮುಖ್ಯ ನ್ಯಾಯ ಮೂರ್ತಿ ಎನ್‌.ವಿ. ರಮಣ ನೇತೃತ್ವದ ನ್ಯಾಯ ಪೀಠ ನಿರ್ಧಾರ ಪ್ರಕಟಿಸಿದೆ. ಜತೆಗೆ ಅದನ್ನು ಶುಕ್ರವಾರವೇ ಲಿಸ್ಟ್‌ ಮಾಡುವಂತೆ ಕೂಡ ಆದೇಶ ನೀಡಿದೆ.

Advertisement

ಈ ವಿಚಾರದಲ್ಲಿ ಹಲವು ಪ್ರಾಥಮಿಕ ಅಂಶಗಳು ಇದ್ದು, ಅದನ್ನು ಆಮೂಲಾಗ್ರವಾಗಿ ಪರಿಶೀಲಿ ಸಬೇಕು. ನ್ಯಾಯಾಂಗ ಈ ವಿಚಾರದಲ್ಲಿ ಯಾವ ಪ್ರಮಾಣದಲ್ಲಿ ಮಧ್ಯಪ್ರವೇಶ ಮಾಡಬೇಕು ಎನ್ನುವುದೂ ಚರ್ಚೆ ಯಾಗಬೇಕಾಗಿದೆ ಎಂದು ನ್ಯಾ| ಹಿಮಾ ಕೋಹ್ಲಿ ಮತ್ತು ನ್ಯಾ| ಸಿ.ಟಿ.ರವಿ ಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು. 2013ರಲ್ಲಿ ಎಸ್‌.ಸುಬ್ರಮಣಿಯನ್‌ ಬಾಲಾಜಿ ಮತ್ತು ತಮಿಳು ನಾಡು ಸರಕಾರ ನಡುವಿನ ಪ್ರಕರಣದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟಿತು.

2013ರಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪಿನಲ್ಲಿ ಚುನಾವಣ ಪ್ರಣಾಳಿಕೆಯಲ್ಲಿ ಕೊಡುಗೆಗಳನ್ನು ನೀಡುವ ಬಗ್ಗೆ ಮಾಡಿದ ವಾಗ್ಧಾನವನ್ನು ಭ್ರಷ್ಟ ಪದ್ಧತಿ ಎನ್ನುವಂತಿಲ್ಲ ಎಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next