Advertisement

ಬಡ ಬಂಧಿಗಳಿಗೆ ಉಚಿತ ಜಾಮೀನು

07:17 PM Apr 23, 2023 | Team Udayavani |

ಬೆಂಗಳೂರು: ರಾಜ್ಯ ಪರಿವರ್ತನ ಖೈದಿಗಳ ಕ್ಷೇಮಾಭಿವೃದ್ಧಿ ಚಾರಿಟೇಬಲ್‌ ಟ್ರಸ್ಟ್‌ನಿಂದ ಜೈಲಿನಲ್ಲಿರುವ ವಿಚಾರಣಾಧೀನ ಬಡ ಬಂಧಿತರ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ ಉಚಿತವಾಗಿ ಜಾಮೀನು ಕೊಡಿಸಲಾಗುತ್ತದೆ.

Advertisement

ಈ ಟ್ರಸ್ಟ್‌, ಮೂರ್‍ನಾಲ್ಕು ವರ್ಷಗಳಿಂದ ಸಮಾಜಮುಖೀ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು, ಸುಮಾರು 500 ಜನ ಬಂಧಿಗಳಿಗೆ ಉಚಿತವಾಗಿ ಜಾಮೀನು ಕೊಡಿಸಲಾಗಿದ್ದು, ಅವರು ಇಂದು ಸನ್ನಡತೆಯಿಂದ ದುಡಿದು ಬದುಕಿದ್ದಾರೆ. ಆದ್ದರಿಂದ ಬಡ ಬಂಧಿತರಿಗೆ ಉಚಿತ ಜಾಮೀನು ಕೊಡಿಸಲಾಗುವುದು. ಆದರೆ, ಬಂಧಿಯು ಒಂದಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು, ರಾಷ್ಟ್ರದ್ರೋಹ ಮತ್ತು ಬಾಂಬ್‌ ಸ್ಫೋಟದಂತಹ ಪ್ರಕರಣಗಳಿಗೆ ಹಾಗೂ ವಿದೇಶಿ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಟ್ರಸ್ಟ್‌ ರಾಜ್ಯಾಧ್ಯಕ್ಷ ಎಸ್‌.ಶಿವಪ್ರಸಾದ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9066086744/9964636399 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next