Advertisement

ವೊಡಾಫೋನ್‍ ಗ್ರಾಹಕರಿಗೆ ಉಚಿತ ಜ್ಯೋತಿಷ್ಯ ಸಮಾಲೋಚನೆ!

03:11 PM Apr 07, 2022 | Team Udayavani |

ಬೆಂಗಳೂರು: ವೊಡಾಫೋನ್‍-ಐಡಿಯಾ (ವಿಐ) ದಿಂದ ಬೆಂಗಳೂರಿನ ಗ್ರಾಹಕರು ಆಯ್ದ ವೊಡಾಫೋನ್‍ ಸ್ಟೋರ್‍ ಗಳಲ್ಲಿ ಉಚಿತ ಜ್ಯೋತಿಷ್ಯ ಸಲಹೆ, ಸಮಾಲೋಚನೆ ಪಡೆಯುವ ಕೊಡುಗೆ ನೀಡಲಾಗಿದೆ.

Advertisement

ಬೆಂಗಳೂರಿನ ವಿಐ ಗ್ರಾಹಕರು ಜೆ.ಪಿ.ನಗರ, ಬೊಮ್ಮನಹಳ್ಳಿ, ಕಗ್ಗದಾಸಪುರ, ವಿಜಯನಗರ, ಬಸವೇಶ್ವರ ನಗರ, ರಾಮಮೂರ್ತಿ ನಗರ, ಶಂಕರನಗರ, ಮಾರತ್‌ಹಳ್ಳಿ, ರಾಜಾಜಿನಗರ, ಗಾಂಧಿ ಬಜಾರ್ ಮತ್ತು ಜಯನಗರ ವಿಐ ಸ್ಟೋರ್‍ ಗಳನ್ನು, ಉಚಿತವಾಗಿ ಜ್ಯೋತಿಷ್ಯ ಸಮಾಲೋಚನೆ ಪಡೆಯಲು ಭೇಟಿ ಮಾಡಬಹುದು.

ಕರ್ನಾಟಕದ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಬೆಂಗಳೂರಿನಲ್ಲಿರುವ ವಿ ಸ್ಟೋರ್‌ಗಳಲ್ಲಿ ಉಚಿತ ಜ್ಯೋತಿಷ್ಯ ಸಮಾಲೋಚನೆಯನ್ನು ಪಡೆಯಬಹುದು.

ಇದನ್ನೂ ಓದಿ:ಗೋರಖ್ ನಾಥ್ ದೇಗುಲದ ಬಳಿ ದಾಳಿ ಪ್ರಕರಣ; ಯೋಗಿ ಆದಿತ್ಯನಾಥ್ ನಿವಾಸಗಳಿಗೆ ಬಿಗಿ ಭದ್ರತೆ

ವೊಡಾಫೋನ್ ಐಡಿಯಾದ ದಕ್ಷಿಣದ ಕಾರ್ಯಾಚರಣೆಯ ನಿರ್ದೇಶಕ ಎಸ್.ಮುರಳಿ ಈ ಬಗ್ಗೆ ವಿವರ ನೀಡಿ, “ವಿಐ ನಲ್ಲಿ, ನಮ್ಮ ಗ್ರಾಹಕರಿಗೆ ಹೆಚ್ಚು ಮತ್ತು ಉತ್ತಮ ಮೌಲ್ಯವನ್ನು ನೀಡಲು ಜ್ಯೋತಿಷ್ಯ ಸಮಾಲೋಚನೆ ಕೊಡುಗೆ ನೀಡಲಾಗಿದೆ ಎಂದರು.

Advertisement

ಕರ್ನಾಟಕದ ಮೊಬೈಲ್ ಫೋನ್ ಬಳಕೆದಾರರಿಗೆ ವಿಐ ನಿಂದ ರೀಚಾರ್ಜ್‍ ಪ್ಲಾನ್‍ ಗಳ ಕೊಡುಗೆ ನೀಡಲಾಗಿದೆ.

ವಾರಾಂತ್ಯದ ಡೇಟಾ ರೋಲ್‌ ಓವರ್: ಇದು ಬಳಕೆದಾರರಿಗೆ ವಾರದ ದಿನಗಳಲ್ಲಿ ಬಳಕೆಯಾಗದ ದೈನಂದಿನ ಡೇಟಾವನ್ನು ಸಂಗ್ರಹಿಸಲು ಮತ್ತು ವಾರಾಂತ್ಯದಲ್ಲಿ ಅದನ್ನು ಬಳಸಲು ಅನುಮತಿಸುತ್ತದೆ.

ರಾತ್ರಿ ಸಮಯದ ಉಚಿತ ಡೇಟಾ: ಪ್ರೀಪೇಡ್‍ ಗ್ರಾಹಕರು ಯಾವುದೇ ನಿರ್ಬಂಧಗಳಿಲ್ಲದೇ, ಮಧ್ಯರಾತ್ರಿ 12ರಿಂದ ಮುಂಜಾನೆ 6:00 ರ ವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತ ಹೆಚ್ಚಿನ ವೇಗದ ರಾತ್ರಿ ಸಮಯದ ಡೇಟಾವನ್ನು ಪಡೆಯಬಹುದು.

ಡೇಟಾ ಡಿಲೈಟ್ ಗ್ರಾಹಕರು ತಿಂಗಳಿಗೆ ಎರಡು ಬಾರಿ ದಿನಕ್ಕೆ 1ಜಿಬಿ ಹೈ ಸ್ಪೀಡ್ ಡೇಟಾ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next