Advertisement

ಉಡುಗೊರೆ ಆಮಿಷ: 12 ಲಕ್ಷ ರೂ.ಟೋಪಿ

02:07 PM Oct 01, 2022 | Team Udayavani |

ಬೆಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶಕ್ಕೆ ಮರುಳಾದ ಮಹಿಳೆಯೊಬ್ಬರು ಉಡುಗೊರೆ ಪಡೆಯುವ ಆಮಿಷಕ್ಕೊಳಗಾಗಿ ಬರೋಬ್ಬರಿ 12.73 ಲಕ್ಷ ರೂ. ಕಳೆದುಕೊಂಡಿದ್ದಾರೆ.

Advertisement

ರಾಜರಾಜೇಶ್ವರಿನಗರದ ಸರಿತಾ (52) ವಂಚನೆಗೊಳಗಾದವರು. ಅಪರಿಚಿತ ವ್ಯಕ್ತಿಯೊಬ್ಬ ಸರಿತಾ ಅವರ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದ. ಆತ ಕಳುಹಿಸಿದ ಸಂದೇಶಕ್ಕೆ ಸರಿತಾ ಸಹ ಪ್ರತಿಕ್ರಿಯಿಸಿದ್ದರು. ನಂತರ ಇಬ್ಬರೂ ಹಲವು ದಿನಗಳ ಕಾಲ ಚಾಟ್‌ ಮಾಡುತ್ತಿದ್ದರು. ತಾನು ವಿದೇಶದಲ್ಲಿ ಇರುವುದಾಗಿ ಪರಿಚಯಿಸಿಕೊಂಡಿದ್ದ ಅಪರಿಚಿತ ವ್ಯಕ್ತಿಯು “ನಿಮಗೆ ವಿದೇಶದಿಂದಲೇ ಬೆಲೆ ಬಾಳುವ ಉಡುಗೊರೆ ಕಳುಹಿಸಿರುವುದಾಗಿ’ ಹೇಳಿದ್ದ. ಇದಾದ ಕೆಲ ಹೊತ್ತಿನ ಬಳಿಕ ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಅಪರಿಚಿತರು, “ನಿಮ್ಮ ಹೆಸರಿಗೆ ವಿದೇಶದಿಂದ ಬೆಲೆ ಬಾಳುವ ಉಡುಗೊರೆ ಬಂದಿದೆ. ಈ ಉಡುಗೊರೆ ಪಡೆಯಲು ಕಸ್ಟಮ್ಸ್‌, ಜಿಎಸ್‌ಟಿ ಶುಲ್ಕ ಹಾಗೂ ಇನ್ನಿತರ ಶುಲ್ಕ ಪಾವತಿಸಬೇಕು’ ಎಂದು ಸಬೂಬು ಹೇಳಿ ಹಂತ-ಹಂತವಾಗಿ ಸರಿತಾ ಅವರಿಂದ ತಮ್ಮ ಬ್ಯಾಂಕ್‌ ಖಾತೆಗೆ 12.73 ಲಕ್ಷ ರೂ. ಅನ್ನು ಜಮೆ ಮಾಡಿಸಿದ್ದರು.

ಇದಾದ ಬಳಿಕ ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದವರು ಹಾಗೂ ಉಡುಗೊರೆ ಕಳುಹಿಸಿರುವುದಾಗಿ ಹೇಳಿ ವಾಟ್ಸ್‌ಆ್ಯಪ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಸರಿತಾ ಗಮನಕ್ಕೆ ಬಂದಿತ್ತು. ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next